ಕನ್ನಡ ಸಾಹಿತ್ಯದ ವಿವಿಧ ಆಯಾಮಕ್ಕೆ ನಿರಂಜನರ ಕೊಡುಗೆಯನ್ನು ನೆನಪಿಸಿಕೊಳ್ಳಲು ಬನ್ನಿ

Image

ನಿರಂಜನ ಮರು ಓದು ಮಾಲಿಕೆಯ ಪುಸ್ತಕಗಳ ಕಿರು ಪರಿಚಯ

– ಗುರುರಾಜ ದೇಸಾಯಿ

ನಿರಂಜನರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಆಯ್ದ ಬರಹಗಳ ನಾಲ್ಕು ಪುಸ್ತಕಗಳನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ. ಆ ನಾಲ್ಕು ಪುಸ್ತಕಗಳ ಕಿರು ಪರಿಚಯ ಇಲ್ಲಿದೆ. ತೇಜಸ್ವಿನಿ ನಿರಂಜನ ಈ ಮಾಲಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ.

ಬದುಕು-ಬರಹಗಳ ಕತೆ’ (ಸಂಪಾದಕರು : ತೇಜಸ್ವಿನಿ ನಿರಂಜನ, ಪುಟ : 120 , ಬೆಲೆ : ರೂ. 140)

ನಿರಂಜನರ ಬದುಕು, ಬರಹಗಳನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಪ್ರಯತ್ನ `ನಿರಂಜನರ ಬದುಕು-ಬರಹಗಳ ಕತೆ’ ಮಾಲಿಕೆಯ ಮೊದಲ ಪುಸ್ತಕ. ಈ ಪುಸ್ತಕವನ್ನು ತೇಜಸ್ವಿನಿ ನಿರಂಜನ ಸಂಪಾದಿಸಿದ್ದಾರೆ. ನಿರಂಜನ ಅವರ ಬದುಕು- ಬರಹಗಳ ಒಂದು ಸ್ಥೂಲ ಪರಿಚಯ ಕೊಡುವುದು ಕಷ್ಟದ ಕೆಲಸ. ನಿರಂಜನರ ಬದುಕನ್ನು ಅವರ ಆತ್ಮಕಥಾತ್ಮಕ ಬರಹಗಳಿಂದ ಮತ್ತು ಅವರ ಬರಹಗಳನ್ನು ನಿರಂಜನರೇ ತಮ್ಮ ಬರಹಗಳ ಬಗ್ಗೆ ಬರೆದ ಬರಹಗಳಿಂದ ಕಟ್ಟಿಕೊಡಲಾಗಿದೆ. ನಿರಂಜನರ ಬದುಕು ಬರಹಗಳೆರಡೂ ಅಗಾಧ, ಹಲವು ಆಯಾಮಗಳಿಂದ ಕೂಡಿದ್ದು, ವೈವಿಧ್ಯಮಯವೂ ಆಗಿವೆ. ಈ ಪುಸ್ತಕದಲ್ಲಿ ಅವರೇ ಬರೆದ ಅವರ ಪ್ರಕಟಿತ ಕೃತಿಗಳ ಸಂಖ್ಯೆ 62 (25 ಕಾದಂಬರಿಗಳು, 9 ಕಥಾ ಸಂಕಲನಗಳು, 4 ನಾಟಕ ಸಂಗ್ರಹಗಳು, 2 ಜೀವನವೃತ್ತ, 2 ಲೇಖನ ಸಂಗ್ರಹ, 7 ಅಂಕಣ ಬರಹಗಳ ಸಂಗ್ರಹ, 10 ಭಾಷಾಂತರ ಕೃತಿಗಳು, 3 ರಾಜಕೀಯ ಬರಹಗಳ ಸಂಕಲನ) ಮತ್ತು 65 ಸಂಪಾದಿತ ಕೃತಿಗಳ 4 ಸರಣಿ (ಜ್ಞಾನಗಂಗೋತ್ರಿ 7 ಸಂಪುಟಗಳು, ವಿಶ್ವಕಥಾಕೋಶದ 25 ಸಂಪುಟಗಳು, ಪುರೋಗಾಮಿ 8 ಕೃತಿಗಳು, ಜನತಾ ಸಾಹಿತ್ಯದ 25 ಪುಸ್ತಕಗಳು). ಇವಲ್ಲದೆ 2500 ಪುಟಗಳಷ್ಟು ಅಪ್ರಕಟಿತ ಬಿಡಿಬರಹಗಳು, ಪ್ರಸಾರ ಭಾಷಣಗಳು, ರೇಡಿಯೊ ರೂಪಕಗಳು ಇವೆಯಂತೆ.

ಅವರ ಬಡತನ ಸಂಕಷ್ಟಗಳ ಬಾಲ್ಯ; ಜೀವನದುದ್ದಕ್ಕೂ ಬರಹಗಳಿಂದಲೇ ಬದುಕಿದ ಅದ್ವೀತಿಯ ಲೇಖಕ; ಭೂಗತ ಜೈಲುವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ, ಕಮ್ಯುನಿಸ್ಟ್ ರಾಜಕೀಯ ಕಾರ್ಯಕರ್ತ, ನಾಯಕ; ಸಾಹಿತ್ಯ ಚಳುವಳಿಯೊಂದರ ಹರಿಕಾರ; ಅಂಕಣ ಬರಹಗಳನ್ನು ಸಾಹಿತ್ಯದ ಪ್ರಕಾರಕ್ಕೇರಿಸಿದ ಪತ್ರಕರ್ತ; ಸಾಹಿತಿ, ಪತ್ರಕರ್ತರ ಸಂಘಟಕ; ಪುಸ್ತಕ ಪ್ರಕಾಶಕ; ಹಲವು ಕೃತಿಗಳ ಬೃಹತ್ ಸರಣಿಗಳ ಸಂಪಾದಕ – ಹೀಗೆ ಅವರ ಬದುಕಿಗೆ ಹಲವು ಆಯಾಮಗಳಿವೆ.

ಈ ಮೊದಲ ಪುಸ್ತಕದಲ್ಲಿ ಅವರ ಬದುಕು ಮತ್ತು ಬರಹಗಳ ಕತೆಯನ್ನು ಅವರ ಬರಹಗಳ ಆಯ್ದ ಭಾಗಗಳಿಂದಲೇ ಕಟ್ಟಿ ಕೊಡುವ ಪ್ರಯತ್ನ ಮಾಡಲಾಗಿದೆ. ಪುಸ್ತಕದಲ್ಲಿ ಎರಡು ಭಾಗಗಳಿವೆ. ಭಾಗ 1 ರಲ್ಲಿ ಅವರ ಬರಹಗಳಿಂದ ಆಯ್ದ ಆತ್ಕಕಥಾತ್ಮಕ ಭಾಗಗಳು (‘ಸಾಹಿತ್ಯ ಪ್ರೇರಣೆಯ ಮೊದಲ ಹೆಜ್ಜೆಗಳು’ ಎಂಬ ರೇಡಿಯೊ ಭಾಷಣ, ‘ಕುಳಕಂದ ಶಿವರಾಯ-ನಿರಂಜನ ಸಂವಾದ’ ಎಂಬ ವಿಶಿಷ್ಟ ಸಂದರ್ಶನ, ‘ನಿರಂಜನ ವಾಚಿಕೆ – ಪ್ರತಿಧ್ವನಿ’ ಯಲ್ಲಿನ ‘ಪಯಣ’, ‘ಬುದ್ಧಿ ಭಾವ ಬದುಕು’ ನಲ್ಲಿನ ‘ಬಂಧ-ಅನುಬಂಧ’, ಅನುಪಮಾ ಬರೆದ ‘ನಿರಂಜನ-ಅನುಪಮಾ’ ಇವೆ. ಭಾಗ-2 ರಲ್ಲಿ ಅವರ ಬರಹಗಳ ಚಿತ್ರಣವನ್ನು ಸಹ ಅವರ ಬರಹಗಳಿಂದ ಆಯ್ದ ಭಾಗಗಳಿಂದ (ಪ್ರಕಟಿತ ಪುಸ್ತಕಗಳ ಪಟ್ಟಿ, ‘ಪ್ರತಿಧ್ವನಿ’ ವಾಚಿಕೆಯಲ್ಲಿ ವಿವಿಧ ಪ್ರಕಾರಗಳಿಂದ ಆಯ್ದ ಬರಹಗಳ ಮೇಲಿನ ಟಿಪ್ಪಣಿ, ‘ಧ್ವನಿ-1’ ಮತ್ತು ‘ಧ್ವನಿ-2’ರಲ್ಲಿರುವ ‘ಕತೆಗಳು ಹುಟ್ಟಿದ ಬಗೆ’, ಪ್ರಮುಖ ಕೃತಿಗಳಿಗೆ ಬರೆದ ಮುನ್ನುಡಿಗಳು) ಕೊಡಲಾಗಿದೆ.

ಆಯ್ದ ಕತೆಗಳು (ಸಂಪಾದಕರು: ಎಂ.ಜಿ.ಹೆಗಡೆ, ಪುಟ : 120 , ಬೆಲೆ : ರೂ. 140)

ನಿರಂಜನರ ಬರಹದ ಪ್ರಕಾರಗಳಲ್ಲಿ ಮೊದಲನೆಯದೂ ಪ್ರಮುಖವೂ ಆದ ಕತೆಗಳ ಪ್ರಾತಿನಿಧಿಕ ಸಂಕಲನವಿದು. ನಿರಂಜನದ ಸಮಗ್ರ ಕಥಾ ಸಮುಚ್ಛಯ `ಧ್ವನಿ’ಯ ಎರಡು ಸಂಪುಟಗಳಲ್ಲಿ ಒಟ್ಟು ನೂರಾ ಐವತ್ತಾರು ಕಥೆಗಳಿವೆ. ಅವರು 1937 ರಲ್ಲಿ ತಮ್ಮ ಮೊದಲ ಕಥೆಯನ್ನು ಪ್ರಕಟಿಸಿದಾಗ ಅವರಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಕಿಶೋರ. 1984 ರಲ್ಲಿ ತೀರಾ ಇತ್ತೀಚಿನ ಕಥೆ ಪ್ರಕಟವಾದಾಗ ಅವರು ತಮ್ಮ ಸಮಗ್ರ ಕಥಾ ಸಂಪುಟಗಳ ಪ್ರಕಟಣೆಯ ಸಿದ್ಧತೆಯಲ್ಲಿ ತೊಡಗಿದ್ದರು. ನಿರಂಜನರು ಕಥೆ ಬರೆಯುತ್ತಿದ್ದ ಕಾಲದಲ್ಲೇ ಪ್ರವರ್ಧಮಾನಕ್ಕೆ ಬಂದ ನವ್ಯ ಕಥೆ ಮತ್ತು ನವ್ಯ ವಿಮರ್ಶಾಕ್ರಮದ ಪರಿಣಾಮವಾಗಿ ಅ ಕಥಾ ಮಾರ್ಗಕ್ಕೆ ಸಮ್ಮತವಾದ ನಿರಂಜನರ `ಕೊನೆಯ ಗಿರಾಕಿ’ ಮಾತ್ರವೇ ಎಲ್ಲಾ ಪ್ರಾತಿನಿಧಿಕ ಸಂಕಲನಗಳಲ್ಲೂ ಸ್ಥಾನ ಪಡೆದು ನಿರಂಜನರ ಕಥಾ ಸಾಹಿತ್ಯದ ಸಮೃದ್ಧಿ ಅವಗಣನೆಗೆ ಒಳಗಾಗುವಂತಾಯಿತು.ನಿರಂಜನರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ ಈ ಸಂಕಲನ ಅವರ ಕಥಾಸಾಹಿತ್ಯದ ವೈವಿಧ್ಯದ ಕಡೆ ಗಮನ ಸೆಳೆಯುತ್ತದೆ. ಈ ಪುಸ್ತಕದಲ್ಲಿ ಒಟ್ಟು ಹತ್ತು ಕತೆಗಳಿವೆ. ಕರುಳಿನ ಕೂಗು, ಆ ಜೀವನ!, ಬೆಳಕು ಹರಿಯಿತು, ಕಾತ್ಯಾಯಿನಿ, ಕೋದಂಡ ಮತ್ತು ಕರಗ, ಒಂದೇ ನಾಣ್ಯದ ಎರಡು ಮೈ, ಡಿಲಕ್ಸ್, ಧ್ವನಿ, ಒಂಟಿ ನಕ್ಷತ್ರ ನಕ್ಕಿತು, ನಾಸ್ತಿಕ ಕೊಟ್ಟ ದೇವರು – ಇವು ಆ ಹತ್ತು ಕತೆಗಳು. ಅವನ್ನು ಅವು ಪ್ರಕಟವಾದ ಕಾಲಾನುಕ್ರಮದಲ್ಲಿ ಕೊಡಲಾಗಿದೆ. ನೂರಾ ಐವತ್ತಾರು ಕಥೆಗಳಲ್ಲಿ ಪ್ರಾತಿನಿಧಿಕ ಹತ್ತು ಕತೆಗಳನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸ. ಈ ಹತ್ತು ಕತೆಗಳನ್ನು ಯಾಕೆ ಆಯ್ಕೆ ಮಾಡಲಾಗಿದೆ? ಆ ಕತೆಗಳು ನಿರಂಜನರ ಕತೆಗಳ ವಿನ್ಯಾಸದ, ಆವರಣಗಳ ವೈವಿಧ್ಯತೆ ಮತ್ತು ವಿಸ್ತಾರಗಳನ್ನು ಹೇಗೆ ಪ್ರತಿನಿಧಿಸುತ್ತವೆ? ಅವರ ವಾಸ್ತವವಾದಿ ಕಥನ ಕ್ರಮವು ಪ್ರಬುದ್ಧ ರಾಜಕೀಯ ಪ್ರಜ್ಞೆ ಹಾಗೂ ಸೈದ್ಧಾಂತಿಕ ಸ್ಪಷ್ಟತೆಯಿಂದ ಹೇಗೆ ನಿರ್ದೇಶಿತವಾಗಿದೆ? ಸಮಾಜದ ನಿರ್ಲಕ್ಷಿತ ಲೋಕಗಳ ವಾಸ್ತವವಾದಿ ಗ್ರಹಿಕೆ ಹಾಗೂ ಈ ಲೋಕಗಳ ಪಾಡನ್ನು ಓದುಗರ ಅಂತಃಕರಣಕ್ಕೆ ಮುಟ್ಟಿಸುವ ಬದ್ಧತೆ. ದುರ್ಬಲರಿಗೆ, ರೈತರು, ಕಾರ್ಮಿಕರು ಮತ್ತು ಮಹಿಳೆಯರಿಗೆ, ಧ್ವನಿ ಇಲ್ಲದೆ ಅಸಹಾಯಕರಾದವರಿಗೆ ಸಮಾಜದಲ್ಲಿ ಆಗುತ್ತಿರುವ ಕ್ರೂರ ಅನ್ಯಾಯವನ್ನು ಬಿಡಿಸಿ ತೋರಿಸುವ, ಆ ಮೂಲಕ ಓದುಗರ ಸಹಾನುಭೂತಿಯ ವಲಯವನ್ನು ಹೇಗೆ ವಿಸ್ತರಿಸುತ್ತವೆ? ಕಥಾ ಸಾಹಿತ್ಯದ ಉದ್ದೇಶವನ್ನು ಕುರಿತು ಹೇಗೆ ಚಿಂತಿಸುತ್ತದೆ? – ಇವೆಲ್ಲದರ ಕುರಿತು ಆಯ್ಕೆಯಾದ ಕತೆಗಳ ನಿರ್ದಿಷ್ಟ ಉದಾಹರಣೆಯೊಂದಿಗೆ ಈ ಸಂಗ್ರಹದ ಸಂಪಾದಕರಾದ ಎಂ.ಜಿ.ಹೆಗಡೆ ತಮ್ಮ ಮುನ್ನುಡಿಯಲ್ಲಿ ಬರೆಯುತ್ತಾರೆ.

ಆಯ್ದ ಅಂಕಣ ಬರಹಗಳು (ಸಂಪಾದಕರು : ವಿಶ್ವ ಕುಂದಾಪುರ, ಪುಟ : 144, ಬೆಲೆ : 160)

ಕಥೆ ಕಾದಂಬರಿಗಳ ನಂತರ ನಿರಂಜನರ ಬರಹಗಳ ಪ್ರಕಾರಗಳಲ್ಲಿ ಪ್ರಮುಖವಾದದ್ದು ಮತ್ತು ಬಹುಶಃ ಸಂಖ್ಯಾತ್ಮಕವಾಗಿ ಅತಿ ದೊಡ್ಡದು ಅವರ ಅಂಕಣ ಬರಹಗಳು. ಸುಮಾರು ಎರಡುವರೆ ದಶಕಗಳಲ್ಲಿ (1945-70) ಹರಡಿದ್ದ ಅವರ ಒಟ್ಟು 13 ಅಂಕಣಗಳಲ್ಲಿ 7 ಅಂಕಣ ಬರಹಗಳು ಸಂಕಲನ ರೂಪದಲ್ಲಿ ಮುದ್ರಿತವಾಗಿವೆ. ಅವರ ಅಂಕಣಗಳು ಪ್ರಕಟವಾದ ಪತ್ರಿಕೆಗಳ ಸಂಖ್ಯೆ ಮಾತ್ರವಲ್ಲದೆ ಮುದ್ರಿತ ಅಂಕಣ ಬರೆಹಗಳ ಪ್ರಮಾಣವೂ ಗುಣಮಟ್ಟವೂ ವಿಷಯವೈವಿಧ್ಯವೂ ಅಗಾಧವಾದುದು. ಅವರ ಒಟ್ಟು ಅಂಕಣ ಬರಹಗಳ ಸಂಖ್ಯೆ 2000ಕ್ಕಿಂತಲೂ ಹೆಚ್ಚು. ಕನ್ನಡದ ಪತ್ರಿಕೆಗಳಲ್ಲಿ ಮತ್ತು ಸಾಹಿತ್ಯದಲ್ಲಿ ಅಂಕಣವನ್ನು ಒಂದು ಪ್ರಕಾರವನ್ನಾಗಿ ನೆಲೆಗೊಳಿಸಿದ್ದರಲ್ಲಿ ನಿರಂಜನ ಅಗ್ರಗಣ್ಯರು ಎನ್ನುವುದು ನಿಸ್ಸಂದೇಹವಾಗಿದೆ. ಇಷ್ಟು ವಿಸ್ತಾರವಾದ ಅಂಕಣ ಬರಹಗಳಲ್ಲಿ ಈ ಅಗಾಧ ವೈವಿದ್ಯತೆಯನ್ನು ಪ್ರತಿನಿಧಿಸುವ ಬರಹಗಳ ಆಯ್ಕೆ ಮಾಡುವುದು ಸುಲಭದ ಮಾತಲ್ಲ. ಇದನ್ನು ಸಮರ್ಥವಾಗಿ ನಿರ್ವಹಿಸಿದವರು, ಕನ್ನಡದ ಹಿರಿಯ ಪತ್ರಕರ್ತರಲ್ಲಿ ಒಬ್ಬರಾದ ಮತ್ತು ಈ ಪುಸ್ತಕದ ಸಂಪಾದಕರಾದ ವಿಶ್ವ ಕುಂದಾಪುರ. ನಿರಂಜನರ ಈ ಅಗಾಧ ಅಂಕಣ ಬರಹಗಳ ಲೋಕದ ಸ್ಥೂಲ ಆದರೂ ಸಮಗ್ರ ಪರಿಚಯ ಕೊಡುವ “ಕನ್ನಡ ಪತ್ರಿಕಾ ಆವರಣದಲ್ಲಿ `ಅಂಕಣ’ ತೋರಣ ಕಟ್ಟಿದ ಪತ್ರಕರ್ತ” ಎಂಬ ದೀರ್ಘ ಮುನ್ನುಡಿ ಪುಸ್ತಕದ ಮೆರುಗನ್ನು ಹೆಚ್ಚಿಸಿದೆ.

ಅಂಕಣ ಬರೆಹಗಳ ಈ ಸಂಗ್ರಹದಲ್ಲಿ 1950ರಿಂದ 1970ರ ವರೆಗಿನ ಸಾಧನ ಸಂಚಯ, ಅಂಕಣ, ರಾಜಧಾನಿಯಿಂದ ಮತ್ತು ದಿನಚರಿಯಿಂದ ಸಂಕಲನಗಳಿAದ ಆಯ್ದ 33 ಬರೆಹಗಳಿವೆ. ಇವುಗಳಲ್ಲಿ ವೈಯಕ್ತಿಕ ಅನಿಸಿಕೆ, ಸಾಹಿತ್ಯ-ಸಾಹಿತಿ, ಸಾಂಸ್ಕೃತಿಕ ನೀತಿ, ಮಾಧ್ಯಮ, ವಿಜ್ಞಾನ-ತಂತ್ರಜ್ಞಾನ, ನಾಡು-ರಾಜಕೀಯ ಮತ್ತು ಜಾಗತಿಕ – ಹೀಗೆ ವರ್ಗೀಕರಿಸಲಾದ ಅಧ್ಯಾಯಗಳಲ್ಲಿ ಪ್ರತಿ ವಿಷಯಗಳ 3-4 ಬರೆಹಗಳಿವೆ. ಇವುಗಳನ್ನು ಅವರ ವಿಷಯ, ಶೈಲಿಗಳಲ್ಲಿ ಅಗಾಧ ವೈವಿಧ್ಯತೆ, ಧೋರಣೆಗಳನ್ನು ಮತ್ತು ಮೂರು ದಶಕಗಳ ದೀರ್ಘಕಾಲದಲ್ಲಿ ಅವರ ಬೆಳವಣಿಗೆಯನ್ನು ಬಿಂಬಿಸುವಂತೆ ಆಯ್ದುಕೊಳ್ಳಲಾಗಿದೆ. ಕೆಲವು ಬರೆಹಗಳು ನಿರಂಜನರೇ ಸ್ವತಃ ಸಂಪಾದಿಸಿ 1987ರಲ್ಲಿ ಪ್ರಕಟವಾದ ತಮ್ಮ ಬರೆಹಗಳ ವಾಚಿಕೆ ‘ಪ್ರತಿಧ್ವನಿ’ಯಿಂದ ಆಯ್ದವು. ಇವು ಸ್ವಾಂಪಲ್ ಮಾತ್ರ. ಆದರೆ ನಿರಂಜನರ ಅಂಕಣ ಬರೆಹಗಳ ವೈವಿಧ್ಯತೆ, ಆಳ, ವಿಶಿಷ್ಟ ಶೈಲಿಯ ಒಂದು ನೋಟ ಖಂಡಿತ ಕೊಡುತ್ತದೆ. ಈ ಓದು ಅವರ ಎಲ್ಲ ಅಂಕಣ ಬರಹಗಳ ಸಮಗ್ರ ಅಧ್ಯಯನಕ್ಕೆ, ಮೌಲ್ಯಮಾಪನಕ್ಕೆ ಉತ್ತೇಜಿಸುವ ಸಾಧ್ಯತೆ ಹೊಂದಿವೆ. ಮುನ್ನುಡಿಯಲ್ಲಿ ನಿರಂಜನರ ಅಂಕಣ ಬರಹಗಳ ವಿಶಿಷ್ಟತೆಗಳಾದ ಪದಗಳ ಬಳಕೆ, ಇಂದಿಗೂ ಸಲ್ಲುವ ಪ್ರಸ್ತುತತೆ, ಆಳ ಅನುಭವ, ಸೂಕ್ಷ್ಮ ನಿರೀಕ್ಷಣೆ, ಬದುಕಿಗೆ ನಿಷ್ಠೆಯ ಕುರಿತೂ ಬರೆಯಲಾಗಿದೆ.

ಆಯ್ದ ಸಾಹಿತ್ಯಕ ಬರಹಗಳು (ಸಂಪಾದಕರು : ಮೀನಾಕ್ಷಿ ಬಾಳಿ, ಪುಟ : 144 , ಬೆಲೆ : 160)

ಕನ್ನಡದ ಸಾಹಿತ್ಯಕ ಚಳುವಳಿಗಳಲ್ಲಿ ಒಂದಾದ ‘ಪ್ರಗತಿಶೀಲ ಚಳುವಳಿ’ಯ ಹರಿಕಾರ ಮತ್ತು ನೇತಾರರಾಗಿ ನಿರಂಜನ ಸೃಜನಶೀಲ ಸಾಹಿತ್ಯ ಬರೆಯುವುದಲ್ಲದೆ ಸಾಹಿತ್ಯವಿಪುಲವಾಗಿ ಪುಸ್ತಕ ಪರಿಚಯ, ಪುಸ್ತಕ ವಿಮರ್ಶೆ ಮಾಡಿದವರು. ಸಾಹಿತಿಗಳ ಕುರಿತು ನುಡಿಚಿತ್ರವಲ್ಲದೆ ವಿಮರ್ಶಾತ್ಮಕವಾಗಿ ಬರೆದವರು. ನಿರಂಜನರ ಸಾಹಿತ್ಯಕ ಬರಹಗಳ ಎರಡು ಪ್ರಮುಖ ಪ್ರಕಟಿತ ಸಂಕಲನಗಳೆಂದರೆ ‘ಬುದ್ಧಿ, ಭಾವ, ಬದುಕು’ ಮತ್ತು ‘ಮುಖತ:’ (ಸಂದರ್ಶನಗಳ ಸಂಕಲನ) ಇವಲ್ಲದೆ ಸಾಹಿತ್ಯ ಸಮ್ಮೇಳನಗಳಲ್ಲಿ ಮಾಡಿದ ಭಾಷಣಗಳು, ಅಂಕಣ ಬರಹಗಳಲ್ಲೂ ಸಾಹಿತ್ಯದ ಕುರಿತು ಅವರ ಚಿಂತನೆ ವಿಸ್ತಾರವಾಗಿ ಹರಡಿದೆ. ಈ ಸಂಕಲನದ ಸಂಪಾದಕರು ನಾಡಿನ ಪ್ರಮುಖ ಸಾಹಿತಿ, ಚಿಂತಕರಲ್ಲಿ ಒಬ್ಬರಾದ ಮೀನಾಕ್ಷಿ ಬಾಳಿ ಅವರು.

ಈ ಸಂಕಲನದಲ್ಲಿ ‘ಬುದ್ಧಿ ಭಾವ ಬದುಕು’ ಸಂಕಲನದ 16 ಬರಹಗಳನ್ನು ಆಯ್ದುಕೊಳ್ಳಲಾಗಿದೆ. ‘ಮುಖತಃ’ ಸಂಕಲನದ ಒಂದು ಸಂದರ್ಶನವನ್ನು ಆಯ್ಕೆ ಮಾಡಲಾಗಿದೆ. ಇದು ‘ಸಮುದಾಯ ವಾರ್ತಾಪತ್ರ’ಕ್ಕಾಗಿ ಕನ್ನಡದ ಇಂದಿನ ಮಹತ್ವದ ಲೇಖಕರಾಗಿರುವ ಬರಗೂರು ರಾಮಚಂದ್ರಪ್ಪನವರು ನಿರಂಜನರೊಂದಿಗೆ ಮಾಡಿದ ದೀರ್ಘ ಸಂದರ್ಶನ. ಈ ಬರಹಗಳನ್ನು ಆಯ್ಕೆ ಮಾಡುವಾಗ ನಿರಂಜನ ಲೇಖಕರಾಗಿ ಸಕ್ರಿಯವಾಗಿದ್ದಾಗಿನ ಸುಮಾರು ಐದು ದಶಕಗಳ ಸಾಹಿತ್ಯಕ ಲೋಕದ ಸ್ಥೂಲ ನೋಟ ಕೊಡುವ ಬರಹಗಳಲ್ಲದೆ, ಇಂದಿಗೂ ಪ್ರಸ್ತುತವಾಗಿರುವ ಸಾಹಿತ್ಯಕ ಪ್ರಶ್ನೆಗಳಿಗೆ ಒತ್ತು ಕೊಡಲಾಗಿದೆ. ಈ 17 ಲೇಖನಗಳಲ್ಲಿ ಸುಮಾರು ಅರ್ಧದಷ್ಟು ಬರೆಹಗಳು ಒಟ್ಟು ಪ್ರಗತಿಶೀಲ ಚಳುವಳಿಯ ನಡೆಯನ್ನು ಅದರ ಏಳು-ಬೀಳು, ಸಾಧಕ-ಭಾದಕಗಳನ್ನು ವಸ್ತುನಿಷ್ಟವಾಗಿ ಪೃಥಕ್ಕರಿಸಿವೆ. ಈ ಬರಹಗಳಿಗೆ ಪ್ರಗತಿಶೀಲ ಚಳುವಳಿಯೆಂಬ ಕೇಂದ್ರವಿದೆ. ಆದ್ದರಿಂದ ಪ್ರಗತಿಶೀಲ ಚಳುವಳಿಯನ್ನು ಕುರಿತು ಅಧ್ಯಯನ ಮಾಡುವವರಿಗೆ ಇದೊಂದು ಆಕರ ಕೃತಿಯಾಗಿ ಗಮನ ಸೆಳೆಯುತ್ತದೆ. ಉಳಿದರ್ಧ ಬರೆಹಗಳ ಸಾಹಿತ್ಯದ ಆಧುನಿಕೋತ್ತರ ಕಾಲಘಟ್ಟದಲ್ಲಿ ಕ್ರಮಿಸುತ್ತಿರುವ ನಮಗೆ ಹಿಂದಿನ ಸಾಹಿತಿಗಳ ವರ್ತನೆ, ಅವರ ಬದುಕಿನ ವಿನ್ಯಾಸಗಳು, ಜನತೆ ಅವರನ್ನು ಪರಾಂಬರಿಸುತ್ತಿದ್ದ ಬಗೆ, ಸಾಹಿತ್ಯ ಲೋಕದಲ್ಲಿ ನಡೆಯುತ್ತಿದ್ದ ವಾಗ್ವಾದಗಳ ಉತ್ತಮ ಚಿತ್ರಣ ನೀಡುತ್ತವೆ.

ನಿರಂಜನ ಶತಮಾನ ಮರು ಓದು ಮಾಲಿಕೆ ರಿಯಾಯತಿ ಬೆಲೆಯಲ್ಲಿ ಖರೀದಿಸಿ ಓದಿ

ನಿರಂಜನ ಶತಮಾನ ಮರು ಓದು ಮಾಲಿಕೆ ರಿಯಾಯತಿ ಬೆಲೆಯಲ್ಲಿ ಖರೀದಿಸಿ ಓದಿ

ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾದ ನಿರಂಜನ (1924-1992) ಸೃಜನಶೀಲ ಬರಹಗಾರ, ಪ್ರಗತಿಶೀಲ ಸಾಹಿತ್ಯ ಚಳುವಳಿಕಾರ, ವಿಮರ್ಶಕ, ಪತ್ರಕರ್ತ, ಚಿಂತಕ, ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ರಾಜಕೀಯ ಕಾರ್ಯಕರ್ತ-ನಾಯಕ, `ಮಕ್ಕಳ ವಿಶ್ವಕೋಶ’, ವಿಶ್ವ ಕಥಾಕೋಶದಂತಹ ಮಹಾ ಕನಸು ಕಂಡು ಅವನ್ನು ನನಸು ಮಾಡಬಲ್ಲ ಧೀಮಂತ – ಹೀಗೆ ಹಲವು ಆಯಾಮಗಳನ್ನು ನಿರಂಜನ ಹೊಂದಿದ್ದರು.

ನಿರಂಜನರ ಶತಮಾನದ ಈ ಹೊತ್ತಿನಲ್ಲಿ ನಿರಂಜನರನ್ನು ನೆನಪಿಸಿಕೊಳ್ಳುತ್ತ ಕನ್ನಡ ಸಾಹಿತ್ಯ ಮತ್ತು ಪ್ರಗತಿಪರ ಲೋಕಕ್ಕೆ ಅವರ ಕೊಡುಗೆಯನ್ನು ದಾಖಲಿಸುವುದು ಮತ್ತು ಅದೆಂದಿಗೂ ಸಾಂಸ್ಕೃತಿಕ ಲೋಕದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುವುದು ಕನ್ನಡದ ಸಾರಸ್ವತ ಲೋಕ ಮಾಡಬೇಕಾದ ಕೆಲಸ. ಈ ನಿಟ್ಟಿನಲ್ಲಿ ಕ್ರಿಯಾ ಮಾಧ್ಯಮ ನಿರಂಜನರ ಜನ್ಮ ಶತಾಬ್ದಿಯ ವರ್ಷದಲ್ಲಿ `ನಿರಂಜನ ಶತಮಾನ ಮರು ಓದು ಮಾಲಿಕೆ’ಯ ಪ್ರಕಟಣೆಯನ್ನು ಪ್ರಾರಂಬಿಸಿತ್ತು. ಈಗಾಗಲೇ 4 ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಲಿಕೆಯ ಪ್ರತಿಯೊಂದು ಪುಸ್ತಕವೂ ಆಯಾ ಬಗೆಯ ಪ್ರಾತಿನಿಧಿಕ, ಸಮಕಾಲೀನತೆ ಇರುವ, ಮಹತ್ವದ ಆಯ್ದ ನಿರಂಜನರ ಬರಹಗಳ ಸಂಗ್ರಹವಾಗಿದೆ. ಅದರಲ್ಲಿ ಆಯಾ ಬಗೆಯ ನಿರಂಜನರ ಬರಹಗಳ ಒಟ್ಟು ಸಮೀಕ್ಷೆ, ವಿಮರ್ಶಾತ್ಮಕ ಪಕ್ಷಿ ನೋಟ ಮತ್ತು ಸಮಕಾಲೀನತೆ ನಿರೂಪಿಸುವ ಮುನ್ನುಡಿ ಇವೆ. ಇದರ ಪ್ರಧಾನ ಸಂಪಾದಕರು, ತೇಜಸ್ವಿನಿ ನಿರಂಜನ ಹಾಗೂ ಡಾ.ಎಂ.ಜಿ.ಹೆಗಡೆ, ವಸಂತರಾಜ ಎನ್.ಕೆ ಯವರು ಮಾಲಿಕೆಯನ್ನು ಸಂಯೋಜಿಸಿದ್ದಾರೆ.

Image

ಮೊದಲ ಪುಸ್ತಕದಲ್ಲಿ ನಿರಂಜನರ ಮೊದಲ ಮಗಳು ತೇಜಸ್ವಿನಿ ನಿರಂಜನ ಅವರು ನಿರಂಜನರ ಬದುಕನ್ನು ಅವರ ಆತ್ಮಕಥಾತ್ಮಕ ಬರಹಗಳಿಂದ ಮತ್ತು ಅವರ ಬರಹಗಳನ್ನು ನಿರಂಜನರೇ ತಮ್ಮ ಬರಹಗಳ ಬಗ್ಗೆ ಬರೆದ ಬರಹಗಳಿಂದ ಕಟ್ಟಿಕೊಟ್ಟಿದ್ದಾರೆ. ಕನ್ನಡ ನಾಡಿನ ಸಾಹಿತ್ಯದ ವಿದ್ವಾಂಸರು, ಸಾಹಿತ್ಯ ವಿಮರ್ಶಕರು, ಸಾಂಸ್ಕೃತಿಕ ಚಿಂತಕರು ಮತ್ತು ಲೇಖಕರಾಗಿ ಹೆಸರಾಗಿರುವ ಎಂ.ಜಿ.ಹೆಗಡೆ ಅವರು ನಿರಂಜನರ ಕತೆಗಳನ್ನು ಸಂಪಾದಿಸಿದರೆ, ನಿರಂಜನರ ಅಂಕಣಗಳನ್ನು ನಮ್ಮ ಓದುಗರಿಗೆ ಚಿರಪರಿಚಿತರಾದ ಪತ್ರಕರ್ತ ಮತ್ತು ಲೇಖಕ ವಿಶ್ವ ಕುಂದಾಪುರ ಅವರು ಸಂಪಾದಿಸಿದ್ದಾರೆ ಹಾಗೆಯೇ ಕನ್ನಡ ನಾಡಿನ ವಚನ ಮತ್ತು ತತ್ವಪದ ಸಾಹಿತ್ಯದ ವಿದ್ವಾಂಸರು, ಸಾಂಸ್ಕೃತಿಕ ಚಿಂತಕರು ಮತ್ತು ಚಳುವಳಿಗಾರರು, ಲೇಖಕರಾಗಿ ಹೆಸರಾಗಿರುವ ಡಾ.ಮೀನಾಕ್ಷಿ ಬಾಳಿ ಅವರು ನಿರಂಜನರ ಸಾಹಿತ್ಯಕ ಬರಹಗಳನ್ನು ಸಂಪಾದಿಸಿದ್ದಾರೆ. ಪ್ರತೀ ಪುಸ್ತಕದಲ್ಲಿ ಸಂಪಾದಕರಿAದ ಆಯಾ ಸಾಹಿತ್ಯ ಪ್ರಕಾರಗಳ ಬಗ್ಗೆ ಓದುಗರಿಗೆ ಉಣಬಡಿಸುವ ಒಂದು ಲೇಖನವೂ ಇದೆ.

ಕನ್ನಡ ಸಾಹಿತ್ಯ ಪ್ರಿಯ ಓದುಗರೆಲ್ಲರ ಗ್ರ‍್ರಂಥಾಲಯದಲ್ಲಿ ಇರಲೇ ಬೇಕಾದ ಪುಸ್ತಕಗಳು ಇವು.

ನಿರಂಜನ‌ ಮರು ಓದು ಮಾಲಿಕೆಯ 4 ಪುಸ್ತಕಗಳ ಕಟ್ಟಿಗೆ ನವೆಂಬರ್ 30, 2025 ವರೆಗೆ ವಿಶೇಷ ರಿಯಾಯಿತಿ

ರೂ.600 ಮೂಲಬೆಲೆಯ ೪ ಪುಸ್ತಕಗಳ ಕಟ್ಟು ರೂ.450ರಲ್ಲಿ

ಈ ಕಟ್ಟಿನಲ್ಲಿ ನಿರಂಜನರ – ಬದುಕು ಬರಹಗಳ ಕತೆ, ಆಯ್ದ ಕತೆಗಳು, ಆಯ್ದ ಅಂಕಣ ಬರಹಗಳು, ಆಯ್ದ ಸಾಹಿತ್ಯಕ ಬರಹಗಳು – ಈ ನಾಲ್ಕು ಪುಸ್ತಕಗಳಿವೆ.

ಇಡೀ ಕಟ್ಟು ತೆಗೆದುಕೊಳ್ಳದೆ ಒಂದೆರಡು ಪುಸ್ತಕ ತೆಗೆದುಕೊಂಡರೂ ವಿಶೇಷ ವಿನಾಯಿತಿಯಿದೆ.

ಪುಸ್ತಕಗಳ, ಸಂಪರ್ಕದ, ಹಣ ಪಾವತಿಯ ವಿವರಗಳು ಪೋಸ್ಟರ್ ನಲ್ಲಿವೆ.

ಇಂದೇ ಕೊಳ್ಳಿ

ಕ್ಯಾಸ್ಟ್ರೋ 100 – ಅಪೂರ್ವ ವ್ಯಕ್ತಿತ್ವದ ಫೀಡೆಲ್ ಕ್ಯಾಸ್ಟ್ರೋ ಮತ್ತು ಕ್ಯೂಬಾ ಕ್ರಾಂತಿಯ ಬಗ್ಗೆ ಅರಿಯೋಣ ಬನ್ನಿ

Image
Image
Image
Image

`ಕಾಮ್ರೇಡ್ ಆಗಿ ನನ್ನ ಬದುಕು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಜಗಮೆಚ್ಚಿದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಬೇಟಿಯಾಗಲು ಬನ್ನಿ

ಶೀರ್ಷಿಕೆ : ಕಾಮ್ರೇಡ್ ಆಗಿ ನನ್ನ ಬದುಕು – ನೆಚ್ಚಿನ ಟೀಚರ್ ಜಗಮೆಚ್ಚಿದ ಆರೋಗ್ಯ ಸಚಿವೆಯಾದ ಕಥನ; ಲೇಖಕರು : ಕೆ.ಕೆ.ಶೈಲಜಾ ಸಹ ಲೇಖಕರು : ಮಂಜು ಸಾರಾ ರಾಜನ್; ಅನುವಾದಕರು : ಡಾ. ಎಚ್.ಎಸ್.ಅನುಪಮಾ;  ಪ್ರಕಾಶಕರು : ಕ್ರಿಯಾ ಮಾಧ್ಯಮ ಪ್ರೈ.ಲಿ.; ಪುಟಗಳು :298;  ಬೆಲೆ : ರೂ.350/-;  ಪ್ರಕಟಣಾ ವರ್ಷ:2024

Image

ಕೊವಿಡ್ ಜಗತ್ತು ಹಿಂದೆಂದೂ ಕಂಡರಿಯದ ಒಂದು ಅಸಾಮಾನ್ಯ ಸಾಂಕ್ರಾಮಿಕ ರೋಗವಾಗಿತ್ತು. ಇದು ಸುಭದ್ರ ಆರೋಗ್ಯ ಸವಲತ್ತುಗಳೂ, ವ್ಯವಸ್ಥೆಯೂ ಇಲ್ಲದ ಭಾರತದಂತಹ ದೇಶಗಳಿಗೆ ಮಾತ್ರವಲ್ಲ , ಅತ್ಯಾಧುನಿಕ ಆರೋಗ್ಯ ಸವಲತ್ತುಗಳಿರುವ ಆದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ದುರ್ಬಲವಾಗಿರುವ ಶ್ರೀಮಂತ ದೇಶಗಳಿಗೂ ಅಸಾಮಾನ್ಯ ಸವಾಲಾಗಿತ್ತು. ಅಸಾಮಾನ್ಯ ಸವಾಲುಗಳು ಬಂದಾಗ ಅಸಾಮಾನ್ಯ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ ಎನ್ನಲಾಗುತ್ತದೆ. ಭಾರತದಲ್ಲಿ ಮೊದಲ ಕೊವಿಡ್ ರೋಗಿಯನ್ನು ಪಡೆದ ಕೇರಳದಲ್ಲಿ ಅದನ್ನು ಎದುರಿಸಲು ಬೆಳಕಿಗೆ ಬಂದ ಅಂತಹ ವ್ಯಕ್ತಿ ಆರೋಗ್ಯ ಮಂತ್ರಿ ಶೈಲಜಾ ಟೀಚರ್. ಇದು ಅವರ ಆತ್ಮಕತೆ.

ಇದೊಂದು ವಿಶಿಷ್ಟ ಆತ್ಮಕತೆ. ಅದನ್ನು ಬರೆದ ವಿಧಾನ ಸಹ ವಿಶಿಷ್ಟ. ತಮ್ಮ ಜೀವನವನ್ನು ಗಾಢವಾಗಿ ಪ್ರಭಾವಿಸಿದ ತಮ್ಮ ಅಜ್ಜಿಯ ಬಗ್ಗೆ ಒಂದು ಪುಸ್ತಕ ಬರೆಯಬೇಕು ಅಂತ ಶೈಲಜಾ ಟೀಚರ್ ಯೋಚಿಸುತ್ತಿದ್ದರಂತೆ. ಆದರೆ ಅದು ಅವರ ಅಜ್ಜಿಯ ಕತೆಯನ್ನೂ ಒಳಗೊಂಡ ಆತ್ಮಕತೆಯಾಗಿ ಬೆಳೆದು ಬರಲು ಒಂದು ರೀತಿಯಲ್ಲಿ ಕೊವಿಡ್ ಕಾರಣವಾಯಿತು. ಅವರ ಕೊವಿಡ್ ನಿರ್ವಹಣೆಯ ವೈಖರಿ ಮಾಧ್ಯಮಗಳಲ್ಲಿ ಸಾಕಷ್ಟು ಆಸಕ್ತಿ, ಮೆಚ್ಚಿಗೆ ಹುಟ್ಟಿಸಿತ್ತು. ’ವೋಗ್ ನ ಸಂಪಾದಕರಲ್ಲಿ ಒಬ್ಬರಾದ ಮಂಜು ಸಾರಾ ರಾಜನ್ ಈ ಕುರಿತು ಅವರ ಜತೆ ಹಲವಾರು ಬಾರಿ ಮಾತನಾಡಿ ತಮ್ಮ ಪತ್ರಿಕೆಯಲ್ಲಿ ವಿವರವಾಗಿ ಬರೆದರು. ಶೈಲಜಾ ಟೀಚರ್ ಅವರನ್ನು ’ವೋಗ್ ನ ನವೆಂಬರ್ ೨೦೨೦ ರ ಸಂಚಿಕೆಯಲ್ಲಿ ‘ವರ್ಷದ ನಾಯಕಿ’ ಎಂದು ಗುರುತಿಸಲಾಯಿತು.

ಶೈಲಜಾ ಟೀಚರ್ ಅವರ ಬದುಕಿನ ಪಯಣದ ಬಗ್ಗೆ ಹಲವು ವಿವರಗಳನ್ನು ತಿಳಿದಿದ್ದ ಮಂಜು ಅವರನ್ನು ತಮ್ಮ ಆತ್ಮಕತೆಯನ್ನು ಬರೆಯಬೇಕು ಅಂತ ಪ್ರೆರೇಪಿಸುತ್ತಾರೆ, ಒತ್ತಾಯಿಸುತ್ತಾರೆ, ತಾವು ಬರವಣಿಗೆಯಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡುತ್ತಾರೆ. ಯಾವುದೇ ಡೈರಿ, ಟಿಪ್ಪಣಿಯಿಲ್ಲದೆ ಶೈಲಜಾ ಟೀಚರ್ ತಮ್ಮ ನೆನಪುಗಳನ್ನು, ಅನುಭವ ಕಥನಗಳನ್ನು ಹೇಳುತ್ತಾ ಹೋಗುತ್ತಾರೆ. ಮಂಜು ’ಎಲ್ಲವನ್ನು ಇಂಗ್ಲೀಷಿನಲ್ಲಿ ಚಂದವಾಗಿ ಸಂಘಟಿಸಿ, ಜೋಡಿಸಿ, ಕೌಶಲ್ಯಪೂರ್ಣವಾಗಿ ಹರಿತಗೊಳಿಸಿ’ ಬರೆಯುತ್ತಾರೆ. ಶೈಲಜಾ ಕರಡು ನೋಡಿ ತಿದ್ದುತ್ತಾರೆ, ಸೇರಿಸುತ್ತಾರೆ. ಕೊವಿಡ್ ತಂದಿಟ್ಟ ಹಲವು ಸವಾಲುಗಳು ಮತ್ತು ಸಕ್ರಿಯ ರಾಜಕಾರಣಿ ಹಾಗೂ ಸಚಿವರಾಗಿದ್ದ ಶೈಲಜಾ ಅವರ ನೂರು ಕೆಲಸಗಳ ನಡುವೆ ಪುಸ್ತಕದ ಬರವಣಿಗೆ ಕುಂಟುತ್ತಾ ಸಾಗಿದರೂ ಇದನ್ನು ಮುಗಿಸಲೇಬೇಕೆಂಬ ಇಬ್ಬರ ಬದ್ಧತೆಯಿಂದಾಗಿ ೨೦೨೩ರಲ್ಲಿ ಪುಸ್ತಕ ಪ್ರಕಟವಾಗುತ್ತದೆ.

ಈ ಆತ್ಮಕತೆಯು ಹೂರಣದಲ್ಲೂ ವಿಶಿಷ್ಟವಾಗಿದೆ. ಲೇಖಕರೇ ಹೇಳುವಂತೆ ’ಇದು ನನ್ನ ಕತೆ. ಅದರ ಜೊತೆಜೊತೆಗೇ ಮಲಬಾರಿನ ಕತೆ. ಕೇರಳದಲ್ಲಿ ಕಮ್ಯುನಿಸಂ ಬೆಳೆದ ಕಥನವೂ ಹೌದು.’ ಅವರ ಕುಟುಂಬ, ಅದು ನೆಲೆಸಿದ ಮಲಬಾರಿನ ಹಳ್ಳಿಯ ನೂರಾರು ವರ್ಷಗಳಿಂದ ’ರೂಪುಗೊಂಡ ಭೌಗೋಳಿಕತೆ ಮತ್ತು ಸಾಮಾಜಿಕ-ರಾಜಕೀಯ ರಚನೆಗಳು ಒಬ್ಬ ಮಾನವಳಾಗಿ ಮತ್ತು ರಾಜಕಾರಣಿಯಾಗಿ ನನ್ನನ್ನು, ನನ್ನ ಬದುಕನ್ನು ರೂಪಿಸಿವೆ. ನನ್ನ ಬಾಳಕಥನವನ್ನು ಬರೆಯುವುದು ಎಂದರೆ ಆ ಎಲ್ಲ ಸ್ಫೂರ್ತಿಗಳ ಬಗೆಗೆ ಹಿಂತಿರುಗಿ ನೋಡುವ ಅವಕಾಶ.’ ಎನ್ನುತ್ತಾರೆ ಶೈಲಜಾ. ಅವರ ಕುಟುಂಬ ಕಮ್ಯುನಿಸ್ಟ್ ಚಳುವಳಿಯ ಆರಂಭದಿಂದಲೇ ಅದರ ಜತೆ ಹೆಣೆದುಕೊಂಡಿದ್ದರಿಂದ ಮತ್ತು ಅವರು ಪೂರ್ಣಕಾಲದ ಕಾರ್ಯಕರ್ತರಾಗಿ ಕಮ್ಯುನಿಸ್ಟ್ ಪಕ್ಷದಲ್ಲಿ ತೊಡಗಿಸಿಕೊಂಡದ್ದರಿಂದ ಅವರ ಬಾಳಕತೆ ಕೇರಳದಲ್ಲಿ ಕಮ್ಯುನಿಸ್ಟ್ ಚಳುವಳಿಯ ಕಥನದ ಜತೆಗೂ ಹೆಣೆದುಕೊಳ್ಳುತ್ತದೆ. ಅಸಾಮಾನ್ಯ ಸಾಧನೆ ಮಾಡಿದ ರಾಜಕಾರಣಿಯಾಗಿ ಮತ್ತು ಆರೋಗ್ಯ ಮಂತ್ರಿಯಾಗಿ ಅವರನ್ನು ರೂಪಿಸಿದ ವ್ಯಕ್ತಿಗಳು, ವಿದ್ಯಮಾನಗಳು, ಸಂಘಟನೆಗಳು, ಚಿಂತನೆಗಳ ಕಥನ ಸಹ ಇಲ್ಲಿದೆ. ಈ ಪುಸ್ತಕದಲ್ಲೊಂದು ಕಾಲಾನುಕ್ರಮಣಿಕೆ (ಟೈಮ್ ಲೈನ್) ಇದೆ. ಇದು ಆತ್ಮಕತೆಯಾಗಿರುವುದರಿಂದ ಶೈಲಜಾ ಅವರ ಜೀವನದ ಟೈಮ್ ಲೈನ್ ನ್ನು ಯಾರಾದರೂ ಸಾಮಾನ್ಯವಾಗಿ ನಿರೀಕ್ಷಿಸುತ್ತಾರೆ. ಆದರೆ ಇಲ್ಲಿರುವುದು ಅಪರೂಪದ ಮಾಹಿತಿ ನೀಡುವ ’ಕೇರಳ ಟೈಮ್ ಲೈನ್! ಅನುವಾದಕರ ನುಡಿಯಲ್ಲಿ ಗುರುತಿಸಿದಂತೆ ಇದನ್ನು ’ಒಂದು ಯಶಸ್ವೀ ಮಹಿಳಾ ಕಥನವಾಗಿ; ಯಶಸ್ವಿ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಕಥನವಾಗಿ’ ಸಹ ನೋಡಬಹುದು.

ಪ್ರಕಾಶಕರ ಮಾತಿನಿಂದ

`ನಾನು ರಾಜಕೀಯವನ್ನು ಪ್ರವೇಶಿಸುವುದಕ್ಕೆ ಸಹಾಯಕವಾದ ಕೆಲವೇ ವ್ಯಕ್ತಿಗಳಲ್ಲಿ ಇವರೂ ಒಬ್ಬರು’ ಎಂದು ಅಂಬೇಡ್ಕರ್ ಅವರು ಗುರುತಿಸಿದ ವ್ಯಕ್ತಿ ಆರ್.ಬಿ.ಮೋರೆ, ಅಂಬೇಡ್ಕರ್ ಪ್ರಾರಂಭಿಸಿದ ದಲಿತ ಚಳುವಳಿಯ ಈಗಿನ ಹಂತವನ್ನು ತಿಳಿದುಕೊಳ್ಳಲು, ಚರ್ಚಿಸಲು ಆಯೋಜಿಸಲಾದ ಪುಸ್ತಕ ಬಿಡುಗಡೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ.

https://maps.app.goo.gl/JiGgzQUbnBzZrfLx5

Image

ಆರ್.ಬಿ.ಮೋರೆಯವರ ಪಕ್ಷದ ಸಹೋದ್ಯೋಗಿ, ದತ್ತ ಕೇಳ್ಕರ್, ತಮ್ಮ ಆತ್ಮಚರಿತ್ರೆ, ಆತ್ಮಬೋಧ್ ಕೃತಿಯಲ್ಲಿ ಈ ಕೆಳಗಿನ ಘಟನೆಯ ಕುರಿತು ಬರೆಯುತ್ತಾರೆ:

ಒಂದು ಸಂಜೆ, ನಾವು ದಳ್ವಿ ಕಟ್ಟಡದ ಮುಂದೆ ಕುಳಿತಿದ್ದಾಗ, ಮೋರೆ ನನ್ನ ಭುಜದ ಮೇಲೆ ಕೈಯಿಟ್ಟು ಹೇಳಿದರು, “ಕಾಮ್ರೇಡ್, ನೀವು ಈಗ ಯಾವ ವಿಶೇಷ ಕೆಲಸದಲ್ಲಿ ನಿರತರಾಗಿದ್ದೀರಿ? ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕಾಮಗಾರ್ ಮೈದಾನದಲ್ಲಿ ಸಭೆ ನಡೆಸುತ್ತಿದ್ದಾರೆ. ಅಲ್ಲಿಗೆ ಹೋಗೋಣ” ಎಂದು ಕರೆದರು. ನಾವು ಹೊರಟೆವು. ನಾವು ದಾರಿಯಲ್ಲಿ ಹೋಗುತ್ತಿರುವಾಗ, ಮೋರೆ ಹೇಳಿದರು, “ನಾವು ಸಭೆಯ ಹೊರ ಅಂಚಿನಲ್ಲಿಯೇ ನಿಂತಿರೋಣ, ಹೊರಡುವಾಗ ಸುಲಭವಾಗುತ್ತದೆ”. ಸರಿ ಎಂದು ನಾವು ವೇದಿಕೆಯಿಂದ ಸುಮಾರು ನೂರು ಅಡಿ ದೂರದಲ್ಲಿದ್ದ ಒಂದು ಫುಟ್‌ಪಾತಿನ ಮೇಲೆ ನಿಂತೆವು. ನಾವು ಅಲ್ಲಿಗೆ ತಲುಪುವ ಹೊತ್ತಿಗೆ ಮಡ್ಕೆ ಬುವಾರ ಪರಿಚಯ ಭಾಷಣ ಮುಗಿಯುತ್ತಾ ಬಂದಿತ್ತು. ಕೊನೆಯಲ್ಲಿ ಅವರು ಸಭಿಕರಿಗೆ ಮಾರ್ಗದರ್ಶನ ನೀಡಲು ಬಾಬಾಸಾಹೇಬರನ್ನು ವಿನಂತಿಸಿಕೊAಡರು. ಬಾಬಾಸಾಹೇಬ್ ಆ ದಿನಗಳಲ್ಲಿ ವೈಸ್‌ರಾಯರ ಎಗ್ಸಿಕ್ಯುಟಿವ್ ಕೌನ್ಸಿಲ್ಲಿನ ಸದಸ್ಯರಾಗಿದ್ದರು, ಅದು ಇವತ್ತಿನ ಸರಕಾರದ ಮಂತ್ರಿಯ ಸ್ಥಾನಕ್ಕೆ ಸಮನಾಗಿತ್ತು. ಆದರೆ, ಆಗಿನ ದಿನಗಳಲ್ಲಿ ಮಂತ್ರಿಗಳಿಗೆ ಹೇಳಿಕೊಳ್ಳುವಂಥ ಭದ್ರತಾ ವ್ಯವಸ್ಥೆಯೇನೂ ಇರುತ್ತಿರಲಿಲ್ಲ. ಬಾಬಾಸಾಹೇಬರು ತಮ್ಮ ಭಾಷಣ ಮಾಡಲು ಎದ್ದು ನಿಂತರು. ಆದರೆ, ಆರ್.ಬಿ.ಮೋರೆ ದೂರದಲ್ಲಿ ಫುಟ್‌ಪಾತ್ ಮೇಲೆ ನಿಂತಿರುವುದು ಅವರ ಗಮನಕ್ಕೆ ಬಂತು. ಅವರು ಜೋರಾಗಿ ಕೂಗಿ ಅವರನ್ನು ಕರೆದರು,

“ಹೇ, ಮೋರೇ ಸಾಹೇಬ್, ನಿಮ್ಮ ಸ್ಥಾನ ಇರುವುದು ಅಲ್ಲಿ ಫುಟ್‌ಪಾತ್ ಕಟ್ಟೆಯ ಮೇಲಲ್ಲ, ಇಲ್ಲಿ, ವೇದಿಕೆಗೆ ಬನ್ನಿ”.

ಮೋರೆಯವರು ಅಲ್ಲಿಂದಲೇ ಅವರಿಗೆ ನಮಸ್ಕರಿಸಿದರು, ಆದರೆ ಅಲ್ಲೇ ನಿಂತು, ‘ಇಲ್ಲೇ ಇರುತ್ತೇನೆ, ಇದೇ ಸರಿ’ ಎನ್ನುವ ಹಾಗೆ ಸನ್ನೆ ಮಾಡಿದರು. ಆದರೆ, ಅಷ್ಟಕ್ಕೇ ಬಿಡದ ಬಾಬಾಸಾಹೇಬರು ಆದೇಶ ನೀಡುವ ಧ್ವನಿಯಲ್ಲಿ, ಅಲ್ಲಿದ್ದವರಿಗೆ, “ಹೋಗಿ, ಮೋರೆಯವರನ್ನು ಇಲ್ಲಿಗೆ ಕರೆದುಕೊಂಡು ಬನ್ನಿ.” ಎಂದರು. ಮೋರೆಯವರನ್ನು ಹೆಸರಿನಿಂದಲೇ ಗುರುತಿಸಿದ ಹತ್ತಾರು ಜನ ಕಾರ್ಯಕರ್ತರು ಮೋರೆಯವರು ಇದ್ದಲ್ಲಿಗೆ ಓಡಿಬಂದರು; ಪಟ್ಟು ಬಿಡದೆ ಅವರನ್ನು ವೇದಿಕೆಗೆ ಕರೆದೊಯ್ದರು. ಅವರು ವೇದಿಕೆಗೆ ಬರುತ್ತಿದ್ದಂತೆ ಬಾಬಾಸಾಹೇಬರು ಮತ್ತೊಮ್ಮೆ ಗುಡುಗಿದರು,

“ಇವರು ಆರ್.ಬಿ. ಮೋರೆ, ಮಹಾನ್ ವ್ಯಕ್ತಿ. ನಾನು ರಾಜಕೀಯವನ್ನು ಪ್ರವೇಶಿಸುವುದಕ್ಕೆ ಸಹಾಯಕವಾದ ಕೆಲವೇ ವ್ಯಕ್ತಿಗಳಲ್ಲಿ ಮೋರೆಯವರೂ ಒಬ್ಬರು”

ಎಂದರು.

ಇಂತಹ ಮಹಾನ್ ವ್ಯಕ್ತಿತ್ವದ ಇಬ್ಬರು ಹುಟ್ಟುಹಾಕಿದ ಚಳುವಳಿ ಪ್ರಸ್ತುತ ಯಾವ ಹಂತದಲ್ಲಿದೆ ಎಂದು ಚರ್ಚಿಸುವ ಅಗತ್ಯ ಹಿಂದೆಂದಿಗಿಂತಲೂ ಈಗ ಇದೆಯಾದ್ದರಿಂದ `ಅಂಬೇಡ್ಕರ್, ಮೋರೆ ಮತ್ತು ಇಂದಿನ ಚಳುವಳಿ : ಸವಾಲುಗಳು, ಸಾಧ್ಯತೆಗಳು’ ವಿಷಯವಾಗಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಇದೇ ವಿಚಾರ ಸಂಕಿರಣದ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದೇಶದ ಪ್ರಗತಿಯನ್ನು ಬಯಸುವ ಎಲ್ಲರೂ ಈ ಇಬ್ಬರು ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಪುಸ್ತಕವನ್ನು ಖರೀದಿಸಿ ಪ್ರೋತ್ಸಾಹಿಸಬೇಕಾಗಿದೆ.

ಪುಸ್ತಕದೊಳಗಿಂದ

ಶೀರ್ಷಿಕೆ : ಆರ್.ಬಿ.ಮೋರೆ – ಮೊದಲ ದಲಿತ ಕಮ್ಯುನಿಸ್ಟ್ ; ಲೇಖಕರು : ಆರ್.ಬಿ.ಮೋರೆ ಮತ್ತು ಸತ್ಯೇಂದ್ರ ಮೋರೆ ಅನು:ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷಾ; ಪ್ರಕಾಶಕರು : ಕ್ರಿಯಾ ಮಾಧ್ಯಮ ಪ್ರೈ. ಲಿ.; ಪುಟಗಳು : 384; ಬೆಲೆ : ರೂ.450/-; ಪ್ರಕಟಣಾ ವರ್ಷ : 2024

ಪುಸ್ತಕಗಳಿಗಾಗಿ ಇವರನ್ನು ಸಂಪರ್ಕಿಸಬಹುದು :

Kriya Madhyama, 37/A, 4th Cross, Mahalakshmi Layout, Bengaluru – 560086
PH:080-23494488; Email : [email protected]
Kriya Madhyama, #70, 2nd Floor; Subarama Chetty Road,
Nettakkallappa Circle, (Near Bayara’s Coffee Shop)
Basavanagudi, Bengaluru – 560004; 9606016471-2-3

`ಆರ್.ಬಿ.ಮೋರೆ – ಮೊದಲ ದಲಿತ ಕಮ್ಯುನಿಸ್ಟ್’ ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕಿರಣಕ್ಕೆ ಆಹ್ವಾನ

Image

`ಆರ್.ಬಿ.ಮೋರೆ, ಮೊದಲ ದಲಿತ ಕಮ್ಯುನಿಸ್ಟ್’ ಇದು ಎರಡು ರೀತಿಗಳಲ್ಲಿ ಒಂದು ವಿಶಿಷ್ಟ ಕೃತಿ. ತಂದೆಯ ಅಪೂರ್ಣ ಸ್ವಚರಿತ್ರೆಯನ್ನು ಮಗ ಜೀವನಚರಿತ್ರೆಯಾಗಿ ಪೂರ್ಣಗೊಳಿಸಿರುವುದು ಒಂದು ವೈಶಿಷ್ಟ್ಯ, ಇನ್ನೊಂದು, ಪ್ರಸಕ್ತ ಸಂದರ್ಭದಲ್ಲಿ ಇನ್ನಷ್ಟು ಮಹತ್ವದ ಸಂಗತಿಯಾದ ಬ್ರಿಟಿಷ್ ವಸಾಹತುಶಾಹೀ ಆಳ್ವಿಕೆಯ ಅಡಿಯಲ್ಲಿ ಭಾರತದಲ್ಲಿ ವರ್ಗ ದಮನ ಮತ್ತು ಜಾತಿದಮನದ ವಿರುದ್ಧ ಮೂಡಿಬಂದ ಎರಡು ಜನಾಂದೋಲನಗಳ ನಡುವಿನ ಸಂಬಂಧದ ಬಗ್ಗೆ ಸಾಮಾನ್ಯವಾಗಿ ಇರುವ ಕಲ್ಪನೆಗಳನ್ನು ಮರುವಿಮರ್ಶೆಗೆ ಒಳಪಡಿಸಲು ಪ್ರೇರೇಪಿಸುವ ಕೃತಿ.

ರಾಮಚಂದ್ರ ಬಾಬಾಜಿ ಮೋರೆ, ಡಾ.ಅಂಬೇಡ್ಕರರ ಆರಂಭದ ಮತ್ತು ಅತ್ಯಂತ ಪ್ರಖರ ಅನುಯಾಯಿಗಳಲ್ಲಿ ಒಬ್ಬರು. ಡಾ.ಅಂಬೇಡ್ಕರ್‌ರವರ ನೇತೃತ್ವದ 1927ರ ಐತಿಹಾಸಿಕ ಚವ್ದಾರ್ ಕೆರೆ ಸತ್ಯಾಗ್ರಹಕ್ಕೆ ದಾರಿ ಮಾಡಿಕೊಟ್ಟ ಅವರ ಮೊದಲ ಮಹಾಡ್ ಭೇಟಿಗೆ ಕಾರಣೀಭೂತರಾದವರು, ಅದನ್ನನುಸರಿಸಿ ನಡೆದ ಮನುಸ್ಮೃತಿ ದಹನದ ನಂತರ ಡಾ.ಅಂಬೇಡ್ಕರ್‌ರವರ ಅತ್ಯಂತ ವಿಶ್ವಾಸಾರ್ಹ ಸಹಯೋಗಿಯಾಗಿ ಹೊಮ್ಮಿದರು.  ಅದಾದ ಮೂರು ವರ್ಷಗಳಲ್ಲೇ ಅವರು ಕಮುನಿಸ್ಟ್ ಪಕ್ಷ ಸೇರಿ ಅಚ್ಚರಿ ಮೂಡಿಸಿದರು.

ಗಮನಿಸಬೇಕಾದ ಸಂಗತಿಯೆಂದರೆ, ಇದಕ್ಕೆ ಕಾರಣವಾದ ನಡುವಣ ಮೂರು ವರ್ಷಗಳ ಮೂರು ಘಟನೆಗಳಲ್ಲಿ ಒಂದು,  ಮುಂಬೈಯಲ್ಲಿ 1928ರಲ್ಲಿ ನಡೆದ ಗಿರಣಿ ಕಾರ್ಮಿಕರ ಐತಿಹಾಸಿಕ ಹರತಾಳ. ಆರು ತಿಂಗಳ ಕಾಲ ನಡೆದ ಈ ಹರತಾಳಕ್ಕೆ ಮೋರೆ ಸ್ವತಃ ಸಾಕ್ಷಿಯಾಗಿದ್ದರು. ಈ ಹರತಾಳದ 18 ಬೇಡಿಕೆಗಳ ಪ್ರಣಾಳಿಕೆಯಲ್ಲಿ ದಲಿತರ ಕುರಿತು ಒಂದು ಉಲ್ಲೇಖವಿತ್ತು; ಅದರಲ್ಲಿ, ಬಟ್ಟೆ ನೇಯ್ಗೆಯ ವಿಭಾಗದಲ್ಲಿ, ದಾರವನ್ನು ಶಟಲ್‌ಗೆ ಸುತ್ತುವಾಗ ಅದಕ್ಕೆ ಕೆಲಸಗಾರರ ಉಗುಳಿನಿಂದ ಒದ್ದೆ ಮಾಡಬೇಕಾಗಿತ್ತು; ಆ ವಿಭಾಗದಲ್ಲಿ ದಲಿತ ಕಾರ್ಮಿಕರನ್ನೂ ನೇಮಿಸಬೇಕು ಎಂದು ಈ ಬೇಡಿಕೆಯಾಗಿತ್ತು.

ಸ್ವತಃ ಮೋರೆಯವರೇ ತಾವು ಕಮುನಿಸ್ಟ್ ಪಕ್ಷವನ್ನು ಸೇರುವ ಬಗ್ಗೆ ಬಾಬಾಸಾಹೇಬರಿಗೆ ಹೇಳಿದಾಗ ಅವರು ಕೋಪಿಸಿಕೊಳ್ಳಬಹುದೇನೋ ಎಂದು ಆತಂಕಿತರಾಗಿದ್ದರಂತೆ. ಆದರೆ ಹಾಗಾಗಲಿಲ್ಲ. ಅವರು,

ದಲಿತರನ್ನೂ ಒಳಗೊಂಡ ಹಾಗೆ ಇಡೀ ಮಾನವ ಕುಲದ ವಿಮೋಚನೆಗಾಗಿ ಹೋರಾಡಲು ನಿರ್ಧರಿಸಿದ್ದಕ್ಕೆ ನನಗೆ ಸಂತೊಷವೇ ಆಗಿದೆ

ಎಂದರಂತೆ. ಇತ್ತ ಮೋರೆಯವರೂ ಕೂಡ,

“ಮಾನವ ಜನಾಂಗವನ್ನು ಎಲ್ಲಾ ಬಗೆಯ ಶೋಷಣೆಯಿಂದ ಮುಕ್ತಗೊಳಿಸುವ ಕಾರ್ಯದಲ್ಲಿ ತೊಡಗಲು ಹೊರಡುತ್ತಿರುವೆನಾದರೂ, ಬಂಡವಾಳಶಾಹಿ ಭೂಮಾಲೀಕತ್ವದ ಪ್ರಸ್ತುತ ವ್ಯವಸ್ಥೆಯಲ್ಲಿ ನೀವು ಆರಂಭಿಸಿರುವ, ದಲಿತರ ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳ ಹೋರಾಟವೂ ಅಷ್ಟೇ ಮುಖ್ಯವಾದುದು, .. .. .. ದಲಿತರ ವಿಮೋಚನೆಯ ಪ್ರಶ್ನೆ ಬಂದಾಗ ನನ್ನ ಸ್ವಭಾವ ಮತ್ತು ವರ್ತನೆಯಲ್ಲಿ ನಾನು ನಿಮ್ಮ ಅನುಯಾಯಿಯೇ ಆಗಿರುತ್ತೇನೆ, ನಾನು ನಿಮ್ಮನ್ನು ಬಿಟ್ಟುಹೋಗುವುದಿಲ್ಲ. ದಲಿತರ ಸ್ವತಂತ್ರವಾದ ಹೋರಾಟ ಮತ್ತು ಆಮೂಲಾಗ್ರ ಕ್ರಾಂತಿಗಾಗಿ ಕಾರ್ಮಿಕರ ಹೋರಾಟವು ಜೊತೆಜೊತೆಗೇ ಸಾಗಬಹುದು ಎಂಬುದು ನನ್ನ ವಿಶ್ವಾಸವಾಗಿದೆ”

ಎಂದರAತೆ.

ಇಂತಹ ಮಹಾನ್ ವ್ಯಕ್ತಿತ್ವದ ಇಬ್ಬರು ಹುಟ್ಟುಹಾಕಿದ ಚಳುವಳಿ ಪ್ರಸ್ತುತ ಯಾವ ಹಂತದಲ್ಲಿದೆ ಎಂದು ಚರ್ಚಿಸುವ ಅಗತ್ಯ ಹಿಂದೆಂದಿಗಿಂತಲೂ ಈಗ ಇದೆಯಾದ್ದರಿಂದ `ಅಂಬೇಡ್ಕರ್, ಮೋರೆ ಮತ್ತು ಇಂದಿನ ಚಳುವಳಿ : ಸವಾಲುಗಳು, ಸಾಧ್ಯತೆಗಳು’ ವಿಷಯವಾಗಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಇದೇ ವಿಚಾರ ಸಂಕಿರಣದ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದೇಶದ ಪ್ರಗತಿಯನ್ನು ಬಯಸುವ ಎಲ್ಲರೂ ಈ ಇಬ್ಬರು ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಪುಸ್ತಕವನ್ನು ಖರೀದಿಸಿ ಪ್ರೋತ್ಸಾಹಿಸಬೇಕಾಗಿದೆ.

ಶೀರ್ಷಿಕೆ : ಆರ್.ಬಿ.ಮೋರೆ – ಮೊದಲ ದಲಿತ ಕಮ್ಯುನಿಸ್ಟ್ ; ಲೇಖಕರು : ಆರ್.ಬಿ.ಮೋರೆ ಮತ್ತು ಸತ್ಯೇಂದ್ರ ಮೋರೆ ಅನು:ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷಾ; ಪ್ರಕಾಶಕರು : ಕ್ರಿಯಾ ಮಾಧ್ಯಮ ಪ್ರೈ. ಲಿ.; ಪುಟಗಳು : 384; ಬೆಲೆ : ರೂ.450/-; ಪ್ರಕಟಣಾ ವರ್ಷ : 2024

ಪುಸ್ತಕಗಳಿಗಾಗಿ ಇವರನ್ನು ಸಂಪರ್ಕಿಸಬಹುದು :

Kriya Madhyama, 37/A, 4th Cross, Mahalakshmi Layout, Bengaluru – 560086
PH:080-23494488; Email : [email protected]
Kriya Madhyama, #70, 2nd Floor; Subarama Chetty Road,
Nettakkallappa Circle, (Near Bayara’s Coffee Shop)
Basavanagudi, Bengaluru – 560004; 9606016471-2-3

ನಿರಂಜನರ ಶತಮಾನದ ವರ್ಷದಲ್ಲಿ ನಿರಂಜನ 100 ಮರು ಓದು

Image

ಕನ್ನಡ ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕರಲ್ಲಿ ಒಬ್ಬರಾದ ನಿರಂಜನ (1924-1992) – ಸೃಜನಶೀಲ ಬರಹಗಾರ, ಸಾಹಿತ್ಯ ಚಳುವಳಿಕಾರ, ವಿಮರ್ಶಕ, ಪತ್ರಕರ್ತ, ಚಿಂತಕ, ಸಾಮಾಜಿಕ ರಾಜಕೀಯ ಕಾರ್ಯಕರ್ತ-ನಾಯಕ, ಮಕ್ಕಳ ವಿಶ್ವಕೋಶ, ವಿಶ್ವ ಕಥಾಕೋಶ ದಂತಹ ಮಹಾ ಕನಸು ಕಂಡು ಅವನ್ನು ನನಸು ಮಾಡಬಲ್ಲ ಧೀಮಂತ – ಹೀಗೆ ಹಲವು ಆಯಾಮಗಳನ್ನು ನಿರಂಜನ ಹೊಂದಿದ್ದರು. ನಿರಂಜನರು ಸ್ವತಃ ಬರೆದಿರುವ ಮತ್ತು ಸಂಪಾದಿಸಿರುವ ಹಾಗೂ ಅನುವಾದಿಸಿರುವ ಕೃತಿಗಳ ಒಟ್ಟು ಸಂಖ್ಯೆ 88ಕ್ಕೂ ಹೆಚ್ಚು. ಅವುಗಳಲ್ಲಿ ಸ್ವತಂತ್ರ ಕೃತಿಗಳೇ 50ಕ್ಕೂ ಮೀರಿವೆ. ಅವುಗಳಲ್ಲಿ ಪ್ರಸಿದ್ಧ ಕತೆ ‘ಕೊನೆಯ ಗಿರಾಕಿ’ಯೂ ಸೇರಿದಂತೆ ಕಥಾ ಸಂಗ್ರಹಗಳು (9) ಕಾದಂಬರಿಗಳು (25) ಅಂಕಣ ಬರಹಗಳು (7) ನಾಟಕ (3) ಹಾಗೂ ಪ್ರಬಂಧಗಳು ಇತ್ಯಾದಿ. ಅವರು ಸಂಪಾದಕರಾಗಿ ಹೊರ ತಂದಿರುವ ಕಿರಿಯರ ವಿಶ್ವ ಕೋಶವಾದ ‘ಜ್ಞಾನಗಂಗೋತ್ರಿ’ಯ 7 ಸಂಪುಟಗಳು, ವಿಶ್ವಕಥಾ ಕೋಶದ 25 ಸಂಪುಟಗಳು ಅಲ್ಲದೆ 10 ಭಾಷಾಂತರ ಕೃತಿಗಳು- ಅವರಿಗೆ ಕನ್ನಡ ಸಾಹಿತ್ಯದಲ್ಲಿ ಅನನ್ಯವಾದ ಸ್ಥಾನ ನೀಡಿವೆ.

ಕಡು ಬಡತನದಲ್ಲಿ ನಿರಂಜನ ಅವರ ತಾಯಿ ಏಕಾಂಗಿಯಾಗಿ ತಮ್ಮ ಏಕಮಾತ್ರ ಮಗನನ್ನು ಬೆಳೆಸಿದರು.  ತಮ್ಮ ಬಾಲ್ಯದಲ್ಲಿ ಶಿವರಾಮ ಕಾರಂತರ ಮಕ್ಕಳ ಕೂಟಗಳಲ್ಲಿ ಭಾಗಿಯಾಗಿದ್ದ ಮತ್ತು ಸ್ವಾತಂತ್ರ್ಯ ಚಳುವಳಿಯತ್ತ ಆಕರ್ಷಿತರಾದ ಅವರು ‘ಕಿಶೋರ’ ಮೊದಲಾದ ಕಾವ್ಯನಾಮಗಳಿಂದ ಕತೆ, ಲೇಖನಗಳನ್ನು ಬರೆಯುತ್ತಿದ್ದರು. ಹತ್ತನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ ಮಂಗಳೂರಿನಲ್ಲಿ ಕಡೆಂಗೋಡ್ಲು ಶಂಕರಭಟ್ಟರ ‘ರಾಷ್ಟ್ರಬಂಧು’ ಪತ್ರಿಕೆಯಲ್ಲಿ ಉದ್ಯೋಗಿಯಾಗಿ ಸೇರಿದರು. ಮುಂದೆ ಅವರು ಬೆಂಗಳೂರಿನಲ್ಲಿ ಪತ್ರಿಕೋದ್ಯಮಿಯಾಗಿ ಕೆಲಸ ಮಾಡಿದರು. ಪತ್ರಕರ್ತರಾಗಿ ಕಯ್ಯೂರು ಹೋರಾಟದ ನಾಯಕರ ವಿರುದ್ಧ ಮೊಕದ್ದಮೆ ಬಗ್ಗೆ ವರದಿ ಮಾಡುತ್ತಾ ಕಮ್ಯುನಿಸ್ಟ್ ಚಳುವಳಿಯತ್ತ ಆಕರ್ಷಿತರಾದರು. ಎಡಪಂಥೀಯ ನಿಲುವಿನ ಕುಳಕುಂದ ಶಿವರಾಯರು ತೆಲಂಗಾಣ ಚಳವಳಿ ಬಗ್ಗೆ ಬರೆಯಲು ಆ ಸಂದರ್ಭದಲ್ಲಿ ಬಳಸಿದ ಗುಪ್ತನಾಮ ‘ನಿರಂಜನ’ ಮುಂದಿನ ಅವರ ಸಾಹಿತ್ಯ ಬರಹಗಳ ಕಾವ್ಯನಾಮವಾಗಿ ಪರಿವರ್ತಿತವಾಯಿತು.

ಇಷ್ಟು ಕೊಡುಗೆಯನ್ನು ನೀಡಿದ ಸಾಹಿತಿಯೊಬ್ಬರ ಬರಹಗಳು ಇಂದಿನ ಹೊಸ ಪೀಳಿಗೆಯ ಎಷ್ಟು ಜನ ಓದುಗರಿಗೆ ತಿಳಿದಿದೆ?  ಹಾಗಾಗಿ  ನಿರಂಜನರ ಕೃತಿಗಳ ಮರು ಓದು ಹಾಗೂ ನಿರಂಜನ ನೆನಪು ಇಂದಿನ ಅಗತ್ಯವಾಗಿದೆ.  

ನಿರಂಜನರ ಬರಹಗಳನ್ನು ಅದರಲ್ಲೂ ಮುಖ್ಯವಾಗಿ ಕಾದಂಬರಿಗಳನ್ನು ಗಮನಿಸಿದಾಗ ಅವರ ಜನಪರ ದೃಷ್ಟಿ ಸ್ಪಷ್ಟವಾಗಿ ಗೋಚರಿಸುವುದು ಸ್ಪಷ್ಟವೇ ಇದೆ. ಆದರೆ ಅವರ ಬರವಣಿಗೆಯಲ್ಲಿ ಹೊಸ ಸಮಾಜವನ್ನು ಕಟ್ಟುವ ಅವರ ಆದರ್ಶ ಕೇವಲ ಕನಸುಗಾರಿಕೆ ಅಲ್ಲ. ಬರವಣಿಗೆಯ ಚಿತ್ರಕ ಶಕ್ತಿಯ ವಿವರ ಹಾಗೂ ರೂಪಕ ಶಕ್ತಿಯ ವೈವಿಧ್ಯಗಳಿಂದ ನಿರಂಜನರ ಸಾಹಿತ್ಯ ಅವರ ಸಾಹಿತ್ಯಿಕ ಆಶಯವನ್ನು ವಾಸ್ತವದ ವಿವರವಾಗಿ ಕಟ್ಟುತ್ತದೆ. ಇದೊಂದು ರೀತಿಯಲ್ಲಿ ಕಲ್ಪಿತ ವಾಸ್ತವ ರೀತಿಯ ಸೃಷ್ಟಿಯೂ ಹೌದಾದರೂ ನಿರಂಜನರು ಆಶಯದ ಅಭಿವ್ಯಕ್ತಿಯನ್ನು ವಾಸ್ತವದ ಚಿತ್ರಕ ವಿವರಗಳಲ್ಲಿ ನೀಡುತ್ತಾರೆ. 

ಕನ್ನಡ ನಾಡಿನಲ್ಲಿ 1943ರ ಡಿಸೆಂಬರ್‌ನಲ್ಲಿ ಪ್ರಗತಿಶೀಲ ಲೇಖಕರ ಸಂಘ ಅಸ್ತಿತ್ವಕ್ಕೆ ಬಂದಿತು.  ಎಡಪಂಥೀಯ ಸ್ಪಷ್ಟ ನಿಲುವಿನ ನಿರಂಜನ ಅವರು ‘ಕಲೆಗಾಗಿ ಕಲೆ’ ಎಂಬ  ಒಲವನ್ನು ಸಂಪೂರ್ಣ ವಿರೋಧಿಸುತ್ತಿದ್ದರು. . ‘ಪ್ರಗತಿಶೀಲ ಸಾಹಿತ್ಯ’ ಎಂಬ ಪ್ರಬಂಧಗಳ ಸಂಕಲನಕ್ಕೆ ಮುನ್ನುಡಿಯನ್ನು ಬರೆಯುತ್ತಾ  ”ಪ್ರಗತಿಶೀಲ ಸಾಹಿತಿಗಳ ಗುರಿ ಕೇವಲ ಸಾಮಾಜಿಕವಾದ ಸಾಹಿತ್ಯವನ್ನು ನಿರ್ಮಾಣ ಮಾಡುವುದೇ ಅಲ್ಲ, ಸಾಹಿತ್ಯದಲ್ಲಿ ನೈಸರ್ಗಿಕತೆಯೂ ಇರಬೇಕು. ಅಜೇಯ ಶಕ್ತಿಯೂ ಇರಬೇಕು. ಅದು ನಮ್ಮ ಜನತೆಯ ಮಾರ್ಗದರ್ಶಕವಾಗಿರಬೇಕು. ತನ್ನ ಬಾಳಿನಿಂದ, ಭಾವನೆಯಿಂದ, ವಿಚಾರದಿಂದ ಈ ಉದ್ದೇಶದಿಂದ ಹೊರಗೆ ನಿಂತ ಸಾಹಿತ್ಯ ಸತ್ತ ಸಾಹಿತ್ಯ,” ಎಂದು ಘೋಷಿಸಿದ್ದರು. ನಿರಂಜನ ತಮ್ಮ ತತ್ವಕ್ಕೆ ಬದ್ಧರಾಗಿಯೂ ಬದುಕಿನ ವಿವರಗಳನ್ನು ಅಗಾಧ ಜೀವ ಪ್ರೀತಿಯಿಂದ ಬರಹಗಳಲ್ಲಿ ಕಟ್ಟಿದರು.

ನಿರಂಜನ ಅವರ ಮರು ಓದನ್ನು ಸಾಧ್ಯ ಮಾಡುವತ್ತ ಐ.ಬಿ.ಎಚ್ ಮತ್ತು ಕ್ರಿಯಾ ಮಾಧ್ಯಮ ವರ್ಷ ಪೂರ್ತಿ ಪ್ರಕಟಣೆ ಮತ್ತು ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಆರಂಭಿಕ ಕಾರ್ಯಕ್ರಮವಾಗಿ ನಾಲ್ಕು ಪುಸ್ತಕಗಳ ಬಿಡುಗಡೆ ಮತ್ತು ಮರು ಓದು ಮಾತುಕತೆ ಹಮ್ಮಿಕೊಂಡಿದೆ. ಜುಲೈ 27 ಶನಿವಾರದಂದು ಸಂಜೆ 4 ಗಂಟೆಯಿಂದ ಈ ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರಿನ ಕುವೆಂಪು ಸಬಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 

ಧ್ವನಿ-1 ಮತ್ತುಧ್ವನಿ 2 – ಎರಡು ಸಂಪುಟಗಳಲ್ಲಿ ನಿರಂಜನ ಅವರ ಸಮಗ್ರ ಕಥಾ ಸಮುಚ್ಚಯದ

ಕನಸು –  ನಿರಂಜನ ಅವರ ಮೂರು ಕಾದಂಬರಿಗಳ ಸಂಗ್ರಹ

ಮೃತ್ಯುಂಜಯ (ನಾಟಕ) – ಡಾ.ಎಂ.ಜಿ. ಹೆಗಡೆ ಬರೆದಿರುವ ಮೃತ್ಯುಂಜಯ ಮತ್ತು ಚಿರಸ್ಮರಣೆ ಕಾದಂಬರಿಗಳ ರಂಗರೂಪ

ತೇಜಸ್ವಿನಿ ನಿರಂಜನ ಪುಸ್ತಕ ಬಿಡುಗಡೆ ಮಾಡುತ್ತಾರೆ

ನಿರಂಜನ ಮರುಓದು ಮಾತುಕತೆಯಲ್ಲಿ

ಡಾ.ಬಿ.ಆರ್.ಮಂಜುನಾಥ  ‘ನಿರಂಜನರ ಕಥಾ ಜಗತ್ತು’

ಚ.ಹ.ರಘುನಾಥ ‘ನಿರಂಜನರ ಕಾದಂಬರಿಗಳು’

ಬಿ ಸುರೇಶ ‘ದೃಶ್ಯ ಮಾಧ್ಯಮಗಳಲ್ಲಿ ನಿರಂಜನರ ಕತೆ ಕಾದಂಬರಿಗಳು’

ಕುರಿತು ಮಾತನಾಡಲಿದ್ದಾರೆ.


ಜೊತೆಗೆ ನಿರಂಜನರ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ, ಮೃತ್ಯುಂಜಯ ನಾಟಕಗಳ ಹಾಡು ಇರುತ್ತವೆ.

ಏಂಗೆಲ್ಸ್ ಸಂಪಾದಿತ ಮಾರ್ಕ್ಸ್ ಬಂಡವಾಳ ಸಂಪುಟ 2 ರ ಪುಸ್ತಕ ಬಿಡುಗಡೆಗೆ ಆಹ್ವಾನ

Image

ಏಂಗೆಲ್ಸ್ 200 ಮಾಲಿಕೆ ಪ್ರಕೃತಿಯ ಗತಿತಾರ್ಕಿಕತೆ ಪುಸ್ತಕ ಬಿಡುಗಡೆಯಲ್ಲಿ ಭಾಗವಹಿಸಿ

Image

ಕಾರ್ಮಿಕ ವರ್ಗಕ್ಕೆ ತನ್ನನ್ನು ತಾನು ಅರಿತುಕೊಳ್ಳಲು ಮತ್ತು ತನ್ನ ಬಗ್ಗೆ ಪ್ರಜ್ಞಾಶೀಲವಾಗಲು ಕಲಿಸಿದ ಮತ್ತು ಅವರ ಕನಸುಗಳಿಗೆ ಬದಲಿಯಾಗಿ ವಿಜ್ಞಾನವನ್ನು ಒದಗಿಸಿದ ಏಂಗೆಲ್ಸ್ ಅವರ ಪುಸ್ತಕಗಳ ‘ಏಂಗೆಲ್ಸ್ 200’ ಮಾಲಿಕೆಯ ಕೊನೆಯ ಪುಸ್ತಕದ ಬಿಡುಗಡೆ

Image

ಜರ್ಮನ್ ತತ್ವಶಾಸ್ತçಜ್ಞ, ಇತಿಹಾಸಕಾರ, ರಾಜಕೀಯ ಶಾಸ್ತçಜ್ಞ, ಪತ್ರಕರ್ತ ಮತ್ತು ಕ್ರಾಂತಿಕಾರಿ ಸಮಾಜವಾದಿ – ಈ ಎಲ್ಲವೂ ಆಗಿದ್ದ ಫ್ರೆಡರ‍್ರಿಕ್ ಏಂಗೆಲ್ಸ್ ನವೆಂಬರ್ 28, 1820ರಂದು ಹುಟ್ಟಿದ್ದು, 2020ರ ನವೆಂಬರ್ 28ಕ್ಕೆ ಅವರಿಗೆ 200 ವರ್ಷ ತುಂಬಿ, ನವೆಂಬರ್ 2020ರಿಂದ ನವೆಂಬರ್ 2021ರ ಅವಧಿಯನ್ನು ಎಂಗೆಲ್ಸ್ ದ್ವಿಶತಮಾನೋತ್ಸವವಾಗಿ ಜಗತ್ತಿನಾದ್ಯಂತ ಆಚರಿಸಲಾಯಿತು.

ಮಾರ್ಕ್ಸ್ ವಾದ ಎಂದು ಕರೆಯಲಾಗುತ್ತಿರುವ ವಿಶಿಷ್ಟ ಲೋಕದೃಷ್ಟಿಯನ್ನು ಬೆಳೆಸುವಲ್ಲಿ ಮಾರ್ಕ್ಸ್ ಅವರ ಜತೆ ಏಂಗೆಲ್ಸ್ ಅವರ ಪಾತ್ರ ಹೆಚ್ಚು ಕಡಿಮೆ ಸಮಾನವಾಗಿದ್ದರೂ, ಏಂಗೆಲ್ಸ್ ಅವರು ಎರಡನೆಯ ಪಾತ್ರ ವಹಿಸಿದವರೆಂಬAತೆ ಕೆಲವೊಮ್ಮೆ ಪರಿಗಣಿಸಲಾಗುತ್ತದೆ. ಎಂಗೆಲ್ಸ್ ಅವರನ್ನು ಜಗತ್ತಿನ ಮೊದಲ ‘ಮಾರ್ಕ್ಸ್ ವಾದಿ’ ಎಂದೂ ಕರೆಯಲಾಗುತ್ತದೆ. ತನ್ನ ವಿನಮ್ರ ಸ್ವಭಾವದಿಂದಾಗಿ ಏಂಗೆಲ್ಸ್ ಈ ಸ್ಥಾನವನ್ನು ಹೆಮ್ಮೆಯಿಂದ ಒಪ್ಪಿಕೊಂಡಿರಬಹುದು. ಆದರೆ ನಾವೂ ಹೀಗೆ ಹೇಳುವುದು ಸರಿಯಲ್ಲ.

ಮಾನವ ಸಮಾಜದ ಕ್ರಾಂತಿಕಾರಿ ಪರಿವರ್ತನೆಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಏಂಗೆಲ್ಸ್ ಅವರು ಸ್ವತಂತ್ರವಾಗಿ ಹಾಗೂ ಮಾರ್ಕ್ಸ್ ಅವರ ಸಹಯೋಗದಲ್ಲಿ, ಹೀಗೆ ಎರಡು ರೀತಿಯಲ್ಲೂ ಅತ್ಯುತ್ತಮವಾದ ಕೊಡುಗೆ ನೀಡಿದ್ದಾರೆ. ಮಾನವ-ನಿಸರ್ಗ ತತ್ವಮೀಮಾಂಸೆಯನ್ನು ವಿವರಿಸುವುದರಿಂದ ಹಿಡಿದು ನೈಸರ್ಗಿಕ ವಿಜ್ಞಾನಗಳ ಶಾಖೆಗಳು, ಮಾನವ ವಿಜ್ಞಾನಗಳು, ಮಾನವಶಾಸ್ತç, ಚರಿತ್ರೆ, ರಾಜಕೀಯ ಅರ್ಥಶಾಸ್ತ್ರ ಮತ್ತು ತತ್ವಶಾಸ್ತçದವರೆಗೂ ಏಂಗೆಲ್ಸ್ ಒಬ್ಬ ಅನನ್ಯ ಅಸಾಧಾರಣ ಚಿಂತಕರಾಗಿದ್ದರು. ಅವರು ಜಗತ್ತನ್ನು ತಳಮಟ್ಟದಿಂದ ಬದಲಾಯಿಸುವ ಕ್ರಾಂತಿಕಾರಿ ಚಳುವಳಿ ಹಾಗೂ ಅದರ ಸೈದ್ಧಾಂತಿಕ ತಳಪಾಯ ಹಾಕುವ ತಾತ್ವಿಕ ಆಲೋಚನಾ ಕ್ರಮದÀ ಬೆಳವಣಿಗೆಗೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಅವರು ಸ್ವತಂತ್ರವಾಗಿ ಮತ್ತು ಮಾರ್ಕ್ಸ್ ಜೊತೆಗೆ ಜಂಟಿಯಾಗಿ ಹೊರತಂದ ಎಲ್ಲಾ ಕೃತಿಗಳೂ ಪರಸ್ಪರರ ನಡುವೆ ಚರ್ಚೆಗಳ ಮೂಲಕ ಶ್ರೀಮಂತವಾಗಿವೆ.

ಇದಲ್ಲದೆ ಲಂಡನ್ನಿಗೆ ಬಂದ ನಂತರ ಮಾರ್ಕ್ಸ್ ಮತ್ತು ಅವರ ಕುಟುಂಬದ ನಿರ್ವಹಣೆಗೆ ಆರ್ಥಿಕ ಒತ್ತಾಸೆಯನ್ನು ನೀಡುವ ಮೂಲಕ ಮಾರ್ಕ್ಸ್ ತನ್ನ ಅವಿರತ ಅಧ್ಯಯನ ಮತ್ತು ಬೌದ್ಧಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಅನುವು ಮಾಡಿಕೊಟ್ಟಿದ್ದು ಕಡಿಮೆ ಕೊಡುಗೆಯಲ್ಲ. ಮಾರ್ಕ್ಸ್ ಅವರ ಜೀವಿತಾವಧಿಯಲ್ಲಿ ಅವರ ಸಹ-ಚಿಂತಕರಾಗಿ ಸಹ-ಲೇಖಕರಾಗಿ ದುಡಿದದ್ದು ಮಾತ್ರವಲ್ಲದೆ, ಮಾರ್ಕ್ಸ್ ನಿಧನರಾದ ಮೇಲೆ, ಕ್ಲಿಷ್ಟ ಕೈಬರಹಗಳಲ್ಲಿದ್ದ ಅವರ ಬರಹಗಳನ್ನು, ಅವರ ದೃಷ್ಟಿಕೋಣಕ್ಕೆ ಚ್ಯುತಿ ಬಾರದಂತೆ ಪಾಂಡಿತ್ಯಪೂರ್ಣವಾಗಿ ಸಂಪಾದಿಸಿ, ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು ಮಾರ್ಕ್ಸ್ ವಾದದ ಪ್ರಸಾರಕ್ಕೆ ಏಂಗೆಲ್ಸ್ ನೀಡಿದ ಅಸಾಮಾನ್ಯ ಕೊಡುಗೆ.

ಲೆನಿನ್ ಹೇಳುವಂತೆ, ಏಂಗೆಲ್ಸ್ “ಕಾರ್ಮಿಕ ವರ್ಗಕ್ಕೆ ತನ್ನನ್ನು ತಾನು ಅರಿತುಕೊಳ್ಳಲು ಮತ್ತು ತನ್ನ ಬಗ್ಗೆ ಪ್ರಜ್ಞಾಶೀಲವಾಗಲು ಕಲಿಸಿದರು, ಮತ್ತು ಅವರ ಕನಸುಗಳಿಗೆ ಬದಲಿಯಾಗಿ ವಿಜ್ಞಾನವನ್ನು ಒದಗಿಸಿದರು”.

ಹಾಗಾಗಿ, ಏಂಗೆಲ್ಸ್ ಅವರ ಜನ್ಮದಿನದ ದ್ವಿಶತಮಾನೋತ್ಸವದ ಅರ್ಥಪೂರ್ಣ ಆಚರಣೆ, ಇಂದಿಗೂ ಪ್ರಸ್ತುತವಾಗಿರುವ ಅವರ ಕೃತಿಗಳ ಅಧ್ಯಯನ, ಪ್ರಸಾರ ಮತ್ತು ಸಮಕಾಲೀನ ವಿದ್ಯಮಾನಗಳಿಗೆ ಅನ್ವಯಗಳನ್ನು ಒಳಗೊಂಡಿರಬೇಕು. ಅವರ ಹೆಚ್ಚಿನ ಕೃತಿಗಳು ಕನ್ನಡದಲ್ಲಿ ಲಭ್ಯವಿಲ್ಲದಿರುವುದರಿಂದ ಮಾರ್ಕ್ಸ್ ವಾದದ ಲೋಕದೃಷ್ಟಿಯ ಆಧಾರಸ್ತಂಭಗಳು ಎನಿಸಿಕೊಂಡಿರುವ ಅವರ ಪ್ರಮುಖ ಕೃತಿಗಳನ್ನು ಕನ್ನಡದಲ್ಲಿ ಪ್ರಕಟಿಸುವುದು ಆದ್ಯತೆಯದ್ದು. ಈ ಕೆಲಸವನ್ನು ನಾಡಿನ ಪ್ರಗತಿಪರ ಪುಸ್ತಕಗಳ ಪ್ರಕಾಶನಗಳಾದ (ಹಿಂದೆ ಮಾರ್ಕ್ಸ್200 – ಕ್ಯಾಪಿಟಲ್ 150 ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ) ನವಕರ್ನಾಟಕ ಮತ್ತು ಕ್ರಿಯಾ ಮಾಧ್ಯಮ ಗಳು ಜಂಟಿಯಾಗಿ ಯೋಜಿಸಿವೆ. `ಏಂಗೆಲ್ಸ್-200 ಮಾಲಿಕೆ’ಯಲ್ಲಿ ಅವರ ಕೆಲವು ಪ್ರಮುಖ ಕೃತಿಗಳಲ್ಲದೆ, ಅವರ ಬದುಕು-ಬರಹಗಳ ಪರಿಚಯ ಮಾಡಿಕೊಡುವ ಜೀವನಚಿತ್ರಣದ ಪುಸ್ತಕವೂ ಸೇರಿದೆ. ಈ ಮಾಲಿಕೆಯ ಪುಸ್ತಕಗಳು ಈ ಕೆಳಗಿನಂತಿವೆ :

1. ಫ್ರೆಡೆರಿಕ್ ಏಂಗೆಲ್ಸ್ : ಡಾ. ಜಿ. ರಾಮಕೃಷ್ಣ

2. ಜರ್ಮನ್ ಸಿದ್ಧಾಂತ (The German ideology): ವಿ.ಎನ್.ಲಕ್ಷ್ಮೀನಾರಾಯಣ

3. ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವ ಇವುಗಳÀ ಉಗಮ (Origin of Family, Private property and the State) : ಡಾ.ಎಚ್.ಜಿ.ಜಯಲಕ್ಷ್ಮಿ

4. ಪ್ರಕೃತಿಯ ಗತಿತಾರ್ಕಿಕತೆ (Dialectics of Nature) : ಸುಬ್ರಮಣ್ಯ ಗುಡ್ಗೆ

5. ಜರ್ಮನಿಯ ರೈತ ಯುದ್ಧ (Peasant War in Germany) : ನಾ ದಿವಾಕರ

6. ಬಂಡವಾಳ ಸಂಪುಟ-2 (Capital Vol 2) : ಪಿ.ಎ.ಕುಮಾರ್, ವಿ.ಎನ್.ಲಕ್ಷ್ಮೀನಾರಾಯಣ

ಈ ಮಾಲಿಕೆಯಲ್ಲಿನ ಪ್ರತಿ ಕೃತಿಗೂ ಒಂದು ಪ್ರವೇಶಿಕೆ ಇದೆ. ಕೃತಿಯನ್ನು ಅರ್ಥ ಮಾಡಿಕೊಳ್ಳಲು ಬೇಕಾಗುವ – ಹಿನ್ನೆಲೆ, ಕೃತಿಯ ಇಂದಿನ ಪ್ರಸ್ತುತತೆ, ಕೃತಿಯ ಸಾರಾಂಶ, ಕೃತಿಯ ಬಗ್ಗೆ ನಂತರದ ಕಾಲದಲ್ಲಿ ಹುಟ್ಟಿದ ಚರ್ಚೆ-ವಿವಾದಗಳು – ಇವನ್ನು ಪ್ರವೇಶಿಕೆಯು ಒಳಗೊಂಡಿರುತ್ತದೆ.

ಮಾರ್ಕ್ಸ್, ಏಂಗೆಲ್ಸ್ ಮತ್ತು ಲೆನಿನ್ ಮೊದಲಾದ ಅಸಾಧಾರಣ ವ್ಯಕ್ತಿಗಳ ಬದುಕಿನಲ್ಲಿ ಮೂರು ಅಂಶಗಳು ಬಹಳ ಮುಖ್ಯವಾಗುತ್ತವೆ. ಒಂದು, ಚಿಂತನೆಯ ಕ್ಷೇತ್ರಕ್ಕೆ ಅವರ ಕೊಡುಗೆಗಳು. ಎರಡನೆಯದು, ಅವರು ಎಂತಹ ಸವಾಲುಗಳನ್ನು ಎದುರಿಸಿ ಹೋರಾಟಗಳನ್ನು ಸಂಘಟನೆಗಳನ್ನು ಕಟ್ಟಿದರು ಎಂಬುದು. ಮೂರನೆಯದು, ಖಂಡಿತವಾಗಿ ದೈವಾಂಶ ಸಂಭೂತರಲ್ಲದ ಅವರು ನಮ್ಮಂತೆಯೇ ನೋವು-ನಲಿವು, ಸೋಲು-ಗೆಲುವು, ರೋಗ-ರುಜಿನ, ಆಪ್ತೇಷ್ಟರ ಮರಣ-ಜನನ ಎಲ್ಲವನ್ನೂ ಅನುಭವಿಸಿದರು; ಆದರೆ ಸಂಕಲ್ಪ, ಪರಿಶ್ರಮ, ವಿಶಾಲ ಹೃದಯ, ಸಂವೇದನಾಶೀಲತೆಗಳನ್ನು ಬೆಳೆಸಿಕೊಂಡು, ನಮಗೆ ಮಾದರಿಯಾದರು ಎಂಬುದು. ಒಂದು ಜೀವನ ಚರಿತ್ರೆ ಇದೆಲ್ಲವನ್ನೂ ನಮಗೆ ಕಟ್ಟಿಕೊಡಬೇಕು.

ಈಗ ಪ್ರಸ್ತುತ ಏಂಗೆಲ್ಸ್ 200 ಸರಣಿಯ ಪುಸ್ತಕಗಳ ಗುಚ್ಛ ಜೂನ್ 2 ರ ವರೆಗೆ ಮೂಲ ಬೆಲೆ ರೂ.2305 ರ ಬದಲಾಗಿ ವಿನಾಯತಿ ಬೆಲೆಯಲ್ಲಿ ರೂ.1800/- ಕ್ಕೆ ಲಭ್ಯವಿದೆ. ಓದುಗರು ಈ ರಿಯಾಯತಿಯ ಲಾಭವನ್ನು ಪಡೆಯಬಹುದು.

ಡಾ. ಜಿ. ರಾಮಕೃಷ್ಣ ಅವರ ಫ್ರೆಡೆರಿಕ್ ಏಂಗೆಲ್ಸ್ ಪುಸ್ತಕವು ಇವೆಲ್ಲವನ್ನೂ ಪೂರೈಸುತ್ತದೆ ಮಾತ್ರವಲ್ಲ, ಅತ್ಯಂತ ಸರಳ ಹಾಗೂ ಹೃದಯಂಗಮ ಶೈಲಿಯಲ್ಲಿ ಕೈಗೆತ್ತಿಕೊಂಡ ಕಾರ್ಯವನ್ನು ನಿರ್ವಹಿಸಿದೆ ಎಂಬ ಕಾರಣದಿಂದ ಬಹಳ ಮಹತ್ವದ್ದಾಗಿದೆ. ಏಂಗೆಲ್ಸ್ ಅವರ ಅತ್ಯಂತ ಮುಂದುವರೆದ ಚಿಂತನೆಗಳನ್ನು ಪರಿಕಲ್ಪನೆಗಳನ್ನು ಒಳಗೊಂಡ ಅಭಿಜಾತ ಕೃತಿಗಳನ್ನು ಹೊಸಬರಿಗೂ ಗ್ರಹಿಸಲಾಗುವಂತೆ ಚಿಕ್ಕದಾಗಿ ಪರಿಚಯಿಸಿರುವುದು ಇದರ ಇನ್ನೊಂದು ಹೆಗ್ಗಳಿಕೆ.

ಪುಸ್ತಕ ಮಾಲಿಕೆ : ಏಂಗೆಲ್ಸ್ 200; ಶೀರ್ಷಿಕೆ: ಫ್ರೆಡೆರಿಕ್ ಏಂಗೆಲ್ಸ; ಲೇಖಕರು: ಡಾ. ಜಿ. ರಾಮಕೃಷ್ಣ; ಪ್ರಕಾಶಕರು:ನವಕರ್ನಾಟಕ ಪಬ್ಲಿಕೇಷನ್; ಪುಟಗಳು:  ; ಬೆಲೆ:ರೂ.150;

ತತ್ವಶಾಸ್ತçದಲ್ಲಿ ಭಾವನಾವಾದದ ಪ್ರಾಬಲ್ಯವನ್ನು ಹಿಮ್ಮೆಟ್ಟಿಸಲು ಮಾರ್ಕ್ಸ್ ಮತ್ತು ಏಂಗೆಲ್ಸ್ ಇಬ್ಬರೂ ಒಟ್ಟಿಗೇ 1845-46 ರಲ್ಲಿ ತಮ್ಮ ‘ಜರ್ಮನ್ ಐಡಿಯಾಲಜಿ’ (ಜರ್ಮನ್ ಸಿದ್ಧಾಂತದ ವಿಮರ್ಶೆ)ಯಲ್ಲಿ ಚಾರಿತ್ರಿಕ ಭೌತವಾದವನ್ನು ಪ್ರತಿಪಾದಿಸಿದರು. ಮೊಟ್ಟ ಮೊದಲ ಬಾರಿಗೆ, ಈ ಪುಸ್ತಕದಲ್ಲಿ ಕಾರ್ಮಿಕ ವರ್ಗದ ಲೋಕದೃಷ್ಟಿಯಾದ ಗತಿತಾರ್ಕಿಕ ಹಾಗೂ ಚಾರಿತ್ರಿಕ ಭೌತವಾದದ ಮೂಲಾಧಾರವನ್ನು ಸಮಗ್ರವಾಗಿ ಮತ್ತು ವ್ಯವಸ್ಥಿತವಾಗಿ ಮಂಡಿಸಿರುವುದರಿAದ ಈ ಪುಸ್ತಕವು ಮಾಲಿಕೆಯ ಅನಿವಾರ್ಯ ಭಾಗವಾಗಿದೆ.

ಪುಸ್ತಕ ಮಾಲಿಕೆ : ಏಂಗೆಲ್ಸ್ 200; ಶೀರ್ಷಿಕೆ: ಜರ್ಮನ್ ಸಿದ್ಧಾಂತ; ಅನುವಾದಕರು: ವಿ.ಎನ್.ಲಕ್ಷ್ಮೀನಾರಾಯಣ; ಪ್ರಕಾಶಕರು:ಕ್ರಿಯಾ ಮಾಧ್ಯಮ; ಪುಟಗಳು: 220 ; ಬೆಲೆ:ರೂ.220;

ಏಂಗೆಲ್ಸ್ ಅವರು ಚಾರಿತ್ರಿಕ ಭೌತವಾದದ ನಿಯಮಗಳನ್ನು ಅವರ ಕಾಲದಲ್ಲಿ ಲಭ್ಯವಿದ್ದ ಪ್ರಾಚೀನ ಮಾನವ ಸಮಾಜಗಳ ಮಾನವಶಾಸ್ತçದ ಸಾಕ್ಸ್ಯಗಳಿಗೆ ಅನ್ವಯಿಸಿದರು. ತಮ್ಮ ‘ದಿ ಆರಿಜಿನ್ ಆಫ್ ಫ್ಯಾಮಿಲಿ, ಪ್ರೈವೇಟ್ ಪ್ರಾಪರ್ಟಿ ಅಂಡ್ ದಿ ಸ್ಟೇಟ್’(ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವದ ಉಗಮ) ಪುಸ್ತಕದಲ್ಲಿ ಏಂಗೆಲ್ಸ್ ಅವರು ಆಧುನಿಕ ವರ್ಗ ಸಮಾಜದ ಸುತ್ತ ಇರುವ ಮಿಥ್ಯೆಗಳನ್ನು ಬಯಲಿಗೆಳೆಯುತ್ತಾರೆ ಮತ್ತು ಹೇಗೆ ಆಸ್ತಿ-ಆಧಾರಿತ ವರ್ಗ ಸಂಬAಧಗಳು ಕುಟುಂಬದ ಮತ್ತು ಪ್ರಭುತ್ವದ ಮೂಲಗಳನ್ನು ರೂಪಿಸುತ್ತವೆ; ಏಕಪತಿತ್ವ ಅಥವಾ ಏಕಪತ್ನಿತ್ವ, ಪುರುಷ ಪ್ರಾಧಾನ್ಯತೆ ಮತ್ತು ಮಹಿಳೆಯರ ಮೇಲಿನ ದಬ್ಬಾಳಿಕೆಗಳುಳ್ಳ ಸ್ತ್ರೀ ಕುಲದ ವಿರೋಧಿಯಾದ ಒಂದು ವ್ಯವಸ್ಥೆಯನ್ನು ಅವು ಹೇಗೆ ರೂಪಿಸುತ್ತವೆ ಎಂಬುದನ್ನು ಪ್ರಮಾಣಗಳ ಸಹಿತವಾಗಿ ಏಂಗೆಲ್ಸ್ ತೋರಿಸುತ್ತಾರೆ. ಮಹಿಳೆಯರ ದಾಸ್ಯದ ಮೂಲಕಾರಣಗಳು ಮತ್ತು ವಿಮೋಚನೆಯ ಹಾದಿಯನ್ನು ಕುರಿತು ಆ ಮೇಲೆ ವಿಕಾಸಗೊಂಡಿರುವ ಸ್ರೀವಾದಿ ಚಿಂತನೆಯ ಬೇರುಗಳನ್ನು ಏಂಗೆಲ್ಸ್ ಅವರ ಈ ಕೃತಿಯಲ್ಲಿ ಕಾಣಬಹುದಾದ್ದರಿಂದ ಇದನ್ನು ಮಾಲಿಕೆಗೆ ಸೇರಿಸಲಾಗಿದೆ.

ಪುಸ್ತಕ ಮಾಲಿಕೆ : ಏಂಗೆಲ್ಸ್ 200; ಶೀರ್ಷಿಕೆ: ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವ ಇವುಗಳÀ ಉಗಮ; ಅನುವಾದಕರು: ಡಾ.ಎಚ್.ಜಿ.ಜಯಲಕ್ಷ್ಮಿ; ಪ್ರಕಾಶಕರು:ನವಕರ್ನಾಟಕ ಪಬ್ಲಿಕೇಷನ್; ಪುಟಗಳು:  ; ಬೆಲೆ:ರೂ.375;

ನಿಸರ್ಗದಲ್ಲಿ ಗತಿತಾರ್ಕಿಕತೆ ಇದೆ. ಆದರೆ ಅದರಿಂದಲೇ ನಿಸರ್ಗದ ನಿಯಮಗಳನ್ನು ಕಂಡು ಹಿಡಿಯಲಾಗುವುದಿಲ್ಲ. ಆದರೆ ಈ ನಿಯಮಗಳು ಗತಿತಾರ್ಕಿಕತೆಯ ನಿಯಮಗಳಿಗೆ ಅನುಗುಣವಾಗಿರುತ್ತವೆ. ನಿಸರ್ಗ ವಿಜ್ಞಾನದ(ನ್ಯಾಚುರಲ್ ಸೈನ್ಸ್) ವಿವಿಧ ಶಾಖೆ-ವಿಭಾಗಗಳು, ನಿರ್ದಿಷ್ಟ ನೈಸರ್ಗಿಕ ವಿದ್ಯಮಾನಗಳನ್ನು ವಿವರಿಸುವ ನಿಯಮಗಳನ್ನು ಒಟ್ಟುಗೂಡಿಸುವ ಸಂಘಟನಾ ನೀತಿಗಳನ್ನು ಗತಿತಾರ್ಕಿಕತೆ ಕೊಡಬಲ್ಲದು. ಇದು ವಿಜ್ಞಾನದ ತತ್ವಶಾಸ್ತçದ (ಫಿಲಾಸಫಿ ಆಫ್ ಸೈನ್ಸ್) ಅಗತ್ಯವನ್ನು ಪೂರೈಸಬಲ್ಲದು. ನಿಸರ್ಗವನ್ನು ಅರ್ಥೈಸುವ ಭೌತವಾದದ ಆಧಾರವಾಗಬಲ್ಲದು ಎಂದು ವಿವರಿಸುವ ಏಂಗೆಲ್ಸ್ ರ ಮೇರುಕೃತಿ ‘ಡಯಲೆಕ್ಟಿಕ್ಸ್ ಆಫ್ ನೇಚರ್’ (ನಿಸರ್ಗದ ಗತಿತಾರ್ಕಿಕತೆ) ಸಹಜವಾಗಿ ಮಾಲಿಕೆಯ ಭಾಗವಾಗಿದೆ.

ಇತ್ತೀಚಿನ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಗಳಿಂದ, ವಿಜ್ಞಾನದ ತತ್ವಶಾಸ್ತçದ ಮೇಲೆ ಆಗುವ ಪರಿಣಾಮಗಳು, (ದುರ್ಬಳಕೆಯೂ ಸೇರಿದಂತೆ) ಅದರ ಬಳಕೆಗಳಲ್ಲಿ ಸಮಾಜದ ಜತೆ ಇರುವ ಅವುಗಳ ಸಂಬAಧ ಮತ್ತು ಪರಿಣಾಮಗಳನ್ನು ಅರ್ಥೈಸುವುದು ಸಮಸಮಾಜ ಕಟ್ಟುವ ಕಾಯಕದಲ್ಲಿ ಆದ್ಯತೆಯದ್ದಾಗಿರುವ ಇಂದಿನ ಸಂದರ್ಭದಲ್ಲಿ ಈ ಕೃತಿ ಕೊಡುವ ಕಣ್ಣೋಟ ಅÀತ್ಯವಶ್ಯಕವಾದುದು. ಮಾನವ-ನಿಸರ್ಗ ಗತಿತಾರ್ಕಿಕತೆಯು ಹೇಗೆ ವಿಕಾಸಗೊಂಡಿದೆ ಎನ್ನುವುದನ್ನು ತೋರಿಸುವ ಏಂಗೆಲ್ಸ್ ಅವರ ಪ್ರಸಿದ್ಧ ಪ್ರಬಂಧ ‘ದಿ ಪಾರ್ಟ್ ಪ್ಲೇಡ್ ಬೈ ಲೇಬರ್ ಇನ್ ದಿ ಟ್ರಾನ್ಸಿಷನ್ ಫ್ರಮ್ ಏಪ್ ಟು ಮ್ಯಾನ್’(ವಾನರನಿಂದ ಮಾನವನ ಪರಿವರ್ತನೆಯಲ್ಲಿ ಶ್ರಮವು ವಹಿಸಿದ ಪಾತ್ರ) ಈ ಕೃತಿಯ ಭಾಗ,

ಪುಸ್ತಕ ಮಾಲಿಕೆ : ಏಂಗೆಲ್ಸ್ 200; ಶೀರ್ಷಿಕೆ: ಪ್ರಕೃತಿಯ ಗತಿತಾರ್ಕಿಕತೆ; ಅನುವಾದಕರು: ಸುಬ್ರಮಣ್ಯ ಗುಡ್ಗೆ; ಪ್ರಕಾಶಕರು: ಕ್ರಿಯಾ ಮಾಧ್ಯಮ; ಪುಟಗಳು:272; ಬೆಲೆ:ರೂ.330;

1849-50ರಲ್ಲಿ ಪ್ರಕಟವಾದ ‘ದಿ ಪೆಸೆಂಟ್ ವಾರ್ ಇನ್ ಜರ್ಮನಿ’ (ಜರ್ಮನಿಯಲ್ಲಿ ರೈತರ ಯುದ್ಧ) ಕೃತಿ ಏಂಗೆಲ್ಸ್ ಅವರು ಗತಿತಾರ್ಕಿಕ ಭೌತವಾದವನ್ನು ಚರಿತ್ರೆಗೆ ಅನ್ವಯಿಸಿದ ಮೊಟ್ಟ ಮೊದಲ ನೇರ ಪ್ರಯತ್ನವಾಗಿದೆ. ಇದು 1848-49ರ ಕ್ರಾಂತಿಕಾರಿ ದಂಗೆಯ ಪ್ರಯತ್ನಗಳ ಹಿನ್ನೆಲೆಯಲ್ಲಿ, 16ನೇ ಶತಮಾನದ (1524-25) ಜರ್ಮನ್ ರೈತರ ದಂಗೆಯ ಚಾರಿತ್ರಿಕ ವಿಶ್ಲೇಷಣೆ. ಅದುವರೆಗೆ ರೈತರ ದಂಗೆಗೆ ಮತ್ತು ಅದರ ವೈಫಲ್ಯಕ್ಕೆ ಕೊಡಲಾಗುವ ರಾಜಕೀಯ ಮತ್ತು ಧಾರ್ಮಿಕ (ಇದೇ ಅವಧಿಯಲ್ಲಿ ಮಾರ್ಟಿನ್ ಲೂಥರ್ ಪಾಳೆಯಗಾರಿ ವ್ಯವಸ್ಥೆಯ ಭಾಗವಾಗಿದ್ದ ಕ್ಯಾಥೊಲಿಕ್ ಮತವನ್ನು ವಿರೋಧಿಸಿ ಪ್ರೊಟೆಸ್ಟೆಂಟ್ ಮತವನ್ನು ಪ್ರತಿಪಾದಿಸಿದ) ಕಾರಣಗಳನ್ನು ನಿರಾಕರಿಸಿ, ಏಂಗೆಲ್ಸ್ ರ ವಿಶ್ಲೇಷಣೆಯು ಭೌತಿಕ ಆರ್ಥಿಕ ಸಂರಚನೆಯಲ್ಲಿನ ಬದಲಾವಣೆಗಳಿಗೆ ಒತ್ತು ಕೊಡುತ್ತದೆ. ಗತಿತಾರ್ಕಿಕ ಭೌತವಾದವನ್ನು ಚರಿತ್ರೆಗೆ ಅನ್ವಯಿಸುವ ಉತ್ತಮ ಮಾದರಿಯಾಗಿ ಮತ್ತು ಮಧ್ಯಯುಗೀನ ಚರಿತ್ರೆಯ ಸಂಕಥನವಾಗಿ ಇಂದು ಪ್ರಸ್ತುತವಾಗಿದೆ. ಹೀಗಾಗಿ ಈ ಕೃತಿಯನ್ನು ಮಾಲಿಕೆಯಲ್ಲಿ ಸೇರಿಸಲಾಗಿದೆ.

ಪುಸ್ತಕ ಮಾಲಿಕೆ : ಏಂಗೆಲ್ಸ್ 200; ಶೀರ್ಷಿಕೆ: ಜರ್ಮನಿಯ ರೈತ ಯುದ್ಧ; ಅನುವಾದಕರು: ನಾ ದಿವಾಕರ; ಪ್ರಕಾಶಕರು: ಕ್ರಿಯಾ ಮಾಧ್ಯಮ; ಪುಟಗಳು:224  ; ಬೆಲೆ:ರೂ.230;

ಮಾರ್ಕ್ಸ್ ಅವರ ಮರಣಾನಂತರ, ಮಾರ್ಕ್ಸ್ವಾದಿ ದೃಷ್ಟಿಕೋನದ ಅಮೂಲ್ಯ ಕೃತಿಗಳು ಹಾಗೂ ಸೈದ್ಧಾಂತಿಕ ಮೂಲಾಧಾರಗಳನ್ನು ಅಂರ‍್ರಾಷ್ಟಿçÃಯ ಕಾರ್ಮಿಕ ವರ್ಗ ಮತ್ತು ಜಗತ್ತು ತಿಳಿದುಕೊಂಡಿದ್ದು, ಪ್ರಮುಖವಾಗಿ ಏಂಗೆಲ್ಸ್ ಅವರ ಮೂಲಕವೇ. ಮಾರ್ಕ್ಸ್ ಅವರು ಬಿಟ್ಟುಹೋಗಿದ್ದ ಅಪಾರ ಟಿಪ್ಪಣಿಗಳನ್ನು ಜೋಡಿಸಿದ್ದು ಮತ್ತು ಸಂಪಾದಿಸಿದ್ದು ಏಂಗೆಲ್ಸ್ ಅವರು. ಆ ಟಿಪ್ಪಣಿಗಳನ್ನು ಜೋಡಿಸಿ ಸಂಪಾದಿಸುವ ಮೂಲಕ ‘ಕ್ಯಾಪಿಟಲ್’(ಬಂಡವಾಳ) ಸಂಪುಟ 2, ಮತ್ತು ಸಂಪುಟ 3 ನ್ನು ಏಂಗೆಲ್ಸ್ ಹೊರತಂದರು.

‘ಬಂಡವಾಳ’ ಸಂಪುಟ-1, ಬಂಡವಾಳಶಾಹಿ ಉತ್ಪಾದನೆಯಲ್ಲಿ, ಸರಕು, ಮೌಲ್ಯ ಮತ್ತು ಶ್ರಮಗಳ ನಡುವಿನ ಸಾಮಾನ್ಯ ಸಂಬAಧಗಳ ಅನ್ವೇಷಣೆಗೆ ಒತ್ತು ಕೊಡುತ್ತದೆ. ಬಂಡವಳಿಗರ ನಡುವಿನ ಪೈಪೋಟಿ; ಮಿಗುತಾಯ ಮೌಲ್ಯವು (ಮೂಲ ಬಂಡವಾಳದ ಮೇಲಿನ) ಬಡ್ಡಿ, (ಭೂಮಿ ಇತ್ಯಾದಿಗಳ ಮೇಲಿನ) ಬಾಡಿಗೆ, ಮತ್ತು ಲಾಭಗಳಾಗಿ ಹಂಚಿಕೆಯಾಗುವುದು; ಸರಕಿನ ಬೆಲೆ ಮತ್ತು ನೈಜ ವೇತನಗಳಲ್ಲಿ ಮಾರುಕಟ್ಟೆಯ ಪ್ರಭಾವದಿಂದಾಗಿ ಆಗುವ ವ್ಯತ್ಯಯಗಳು ಇವೆಲ್ಲವುಗಳ ಪರಿಣಾಮಗಳನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇವನ್ನು ಗಣನೆಗೆ ತೆಗೆದುಕೊಂಡಾಗ, ಈ ಸಂಬAಧಗಳ ಆಳ ಮತ್ತು ಸಾರಸತ್ವವನ್ನು ಗುರುತಿಸುವುದು ಸಾಧ್ಯವಾಗುತ್ತದೆ. ಮೇಲೆ ಹೇಳಿದ ಈ ಅಂಶಗಳನ್ನು ಸಂಪುಟ 2 ಮತ್ತು 3 ರಲ್ಲಿ ಪ್ರಮುಖವಾಗಿ ಗಣನೆಗೆ ತೆಗೆದುಕೊಂಡು ಬಂಡವಾಳಶಾಹಿ ಉತ್ಪಾದನೆಯ ಮತ್ತು ಚಲಾವಣೆಗಳ ಸಮಗ್ರ ಚಲನೆಯ ಇತರ ಪ್ರಮುಖ ನಿಯಮಗಳನ್ನು ಅನಾವರಣಗೊಳಿಸಲಾಗುತ್ತದೆ. ಸಂಪುಟ 1 ಉತ್ಪಾದನಾ ಪ್ರಕ್ರಿಯೆಯ ವಿವರಣೆ, ವಿಶ್ಲೇಷಣೆ, ವಿಮರ್ಶೆಗೆ ಮೀಸಲಾಗಿದೆ. ಬಂಡವಾಳದ ಚಲಾವಣೆಯನ್ನು ಕೇಂದ್ರದಲ್ಲಿರಿಸಿಕೊAಡ ಬಂಡವಾಳ ಸಂಪುಟ-2 ರ ಅನುವಾದದ ಪ್ರಕಟಣೆ, ಈ ಮಾಲಿಕೆಯ ಭಾಗವಾಗಿ, ‘ಬಂಡವಾಳ’ವನ್ನು ಪೂರ್ಣವಾಗಿ ಕನ್ನಡದಲ್ಲಿ ತರುವ ಯೋಜನೆಯಲ್ಲಿ ಇನ್ನೊಂದು ಹೆಜ್ಜೆಯಾಗಿರುತ್ತದೆ.

ಅಂತರ‍್ರಾಷ್ಟಿçÃಯ ಕಾರ್ಮಿಕ ಚಳುವಳಿಯ ಇಬ್ಬರು ಮಹಾನ್ ನೇತಾರರರಲ್ಲಿ ಒಬ್ಬರಾಗಿದ್ದ ಏಂಗೆಲ್ಸ್ ಇಂತಹ ಪಥಪ್ರದರ್ಶಕ ಸೈದ್ಧಾಂತಿಕ ತಳಹದಿಯನ್ನು ಬೆಳೆಸುತ್ತಿದ್ದರೂ, ಕೇವಲ ಅಕಡೆಮಿಕ್ ಸಿದ್ಧಾಂತಿಯಾಗಿರದೆ, ಅವರ ಕಾಲದ ಕಾರ್ಮಿಕ ಚಳುವಳಿಯಲ್ಲಿ ಹಲವಾರು ಬಾರಿ ಸಕ್ರಿಯವಾಗಿ ಪಾಲ್ಗೊಂಡರು, ಅನೇಕ ವೇಳೆ ಮುಂದಾಳತ್ವ ವಹಿಸಿ ಮಾರ್ಗದರ್ಶನ ನೀಡಿದರು ಕೂಡ. ಕಾರ್ಮಿಕ ವರ್ಗವನ್ನು ವಿಜಯದತ್ತ ಕೊಂಡೊಯ್ಯಲು ಸಮರ್ಥವಾದ ಕ್ರಾಂತಿಕಾರಿ ಸಂಘಟನೆಯನ್ನು ಕಟ್ಟುವುದಕ್ಕಾಗಿ ಏಂಗೆಲ್ಸ್ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು. 1864 ರಲ್ಲಿ, ‘ಮೊದಲ ಅಂರ‍್ರಾಷ್ಟಿçÃಯ’(ಫಸ್ಟ್ ಇಂಟರ್‌ನ್ಯಾಷನಲ್) ಎಂದು ಜನಪ್ರಿಯವಾಗಿ ಕರೆಯಲ್ಪಟ್ಟ “ಇಂಟರ್ ನ್ಯಾಷನಲ್ ವರ್ಕಿಂಗ್ ಮೆನ್ಸ್ ಅಸೋಶಿಯೇಷನ್” ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಲವಾರು ಎಡಪಂಥೀಯ ಗುಂಪುಗಳನ್ನು ಒಂದು ಸರ್ವಸಾಮಾನ್ಯ ಸಂಘಟನೆಯಾಗಿ ಒಟ್ಟುಗೂಡಿಸುವಲ್ಲಿ ಇದು ಮಾರ್ಕ್ಸ್ ಮತ್ತು ಏಂಗೆಲ್ಸ್ ಮಾಡಿದ ಮೊಟ್ಟ ಮೊದಲ ಪ್ರಯತ್ನವಾಗಿತ್ತು ಮತ್ತು ಅಂರ‍್ರಾಷ್ಟಿçÃಯ ಕಾರ್ಮಿಕ ವರ್ಗದ ಚಳುವಳಿಯನ್ನು ಮುಂದೆ ಕೊಂಡೊಯ್ಯುವಲ್ಲಿ ಪ್ರಮುಖ ಹೆಜ್ಜೆಯಾಗಿತ್ತು. ಮಾರ್ಕ್ಸ್ ಮರಣಾನಂತರ ಏಂಗೆಲ್ಸ್ ಸುಮಾರು 12 ವರ್ಷಗಳ ಕಾಲ ಅದನ್ನು ಒಂಟಿಯಾಗಿ ಮುಂದಕ್ಕೆ ಕೊಂಡೊಯ್ದಿದ್ದರು.

ಈ ಮಾಲಿಕೆಯ ಪ್ರಕಟಣೆ, ಬಿಡುಗಡೆಯ ಸಂದರ್ಭದಲ್ಲಿ ಹಮ್ಮಿಕೊಂಡ ಉಪನ್ಯಾಸಗಳು, ವಿಚಾರ ಸಂಕಿರಣಗಳು ಏಂಗೆಲ್ಸ್ ದ್ವಿಶತಮಾನೋತ್ಸವದ ಸಂದರ್ಭದಲ್ಲಿ ಅವರ ಅರ್ಥಪೂರ್ಣ ಮತ್ತು ಸೂಕ್ತ ಸ್ಮರಣೆಯಾಗಿವೆ. ಪ್ಸಸ್ತುತ ಕೃತಿ “ಬಂಡವಾಳ ಸಂಪುಟ-2”ರ ಪ್ರಕಟಣೆಯೊಂದಿಗೆ ಈ ಮಾಲಿಕೆ ಯೋಜನೆ ಸಫಲವಾಗಿ ಕೊನೆಗೊಂಡಿದೆ. ಈ ಮಾಲಿಕೆಯ ಎಲ್ಲ ಪ್ರಕಟಣೆಗಳು ಯೋಜನೆಯ ಪ್ರಕಾರ ನವೆಂಬರ್ 2020 – ನವೆಂಬರ್ 21 ಅವಧಿಯಲ್ಲಿ ಬಿಡುಗಡೆಯಾಗಬೇಕಿತ್ತು. ಮೊದಲ ಎರಡು ಪುಸ್ತಕಗಳು ಜುಲೈ 2021ರಲ್ಲಿ ಬಿಡುಗಡೆಯಾದರೂ ಇತರ 4 ಪುಸ್ತಕಗಳು ವಿಳಂಬವಾಗಿವೆ. ಪ್ರಧಾನವಾಗಿ ಕೊರೋನಾ ಮಹಾಸಾಂಕ್ರಾಮಿಕವು ದೈನಂದಿನ ಜೀವನ, ಆರ್ಥಿಕತೆಯ ಮೇಲೆ ಬೀರಿದ ದುಷ್ಪರಿಣಾಮಗಳು ಮತ್ತು ಯಾವುದೇ ಯೋಜನೆಯಲ್ಲಿ ಎದುರಾಗುವ ಹಲವು ಸವಾಲುಗಳು, ತೊಡಕುಗಳು ಈ ವಿಳಂಬಕ್ಕೆ ಕಾರಣ. ಇದಕ್ಕಾಗಿ ನಮ್ಮ ಯೋಜನೆಯನ್ನು ಬೆಂಬಲಿಸಿದ, ಅದರಲ್ಲೂ ಇಡೀ ಮಾಲಿಕೆಯ ವಿಶೇಷ ಡಿಸ್ಕೌಂಟ್ ಕೂಪನ್ ಖರೀದಿಸಿದ ಓದುಗರಲ್ಲಿ ಕ್ಷಮೆ ಯಾಚಿಸುತ್ತೇವೆ.

ಈ ಮಾಲಿಕೆಯ ಪುಸ್ತಕಗಳನ್ನು ಕನ್ನಡದ ಸಹೃದಯ ಓದುಗರು, ಪ್ರಗತಿಪರರು, ಎಡಪಂಥೀಯರು ತಾವು ಕೊಂಡುಕೊಳ್ಳುವ ಮೂಲಕ ಹಾಗೂ ಗೆಳೆಯರಿಗೆ, ತಾವು ಓದಿದ ಶಾಲಾ-ಕಾಲೇಜುಗಳಿಗೆ, ದುಡಿಯುವ ಜನರ ಸಂಘಟನೆಗಳಿಗೆ, ಇತರ ಸಂಘ-ಸAಸ್ಥೆಗಳಿಗೆ ಉಡುಗೊರೆಯಾಗಿ ನೀಡುವ ಮೂಲಕ ನಿರಂತರವಾಗಿ ಬೆಂಬಲಿಸುತ್ತಾರೆ ಎಂದು ನಂಬಿದ್ದೇವೆ.

Design a site like this with WordPress.com
ಪ್ರಾರಂಭಿಸಿ